SHIVAMOGGA LIVE NEWS, 7 JANUARY 2025
ಶಿವಮೊಗ್ಗ : ಕಳೆದ ಸೆಪ್ಟೆಂಬರ್ನಿಂದ ನವೆಂಬರ್ ತಿಂಗಳವರೆಗೆ ಶಿವಮೊಗ್ಗದ ಐವರು ಮಕ್ಕಳಲ್ಲಿ HMP ಸೋಂಕು ತಗುಲಿರುವುದು ದೃಢವಾಗಿತ್ತು. ಈ ಮಕ್ಕಳು ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಸೋಂಕಿನ ಕುರಿತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.
ಟಿವಿ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಿಗೆ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಸೆಪ್ಟೆಂಬರ್ನಿಂದ ನವೆಂಬರ್ ತಿಂಗಳ ಒಳಗೆ ಐವರು ಮಕ್ಕಳಲ್ಲಿ ಹೆಚ್ಎಂಪಿವಿ ಪಾಸಿಟಿವ್ ಬಂದಿತ್ತು. ಎಲ್ಲ ಮಕ್ಕಳು ಚಿಕಿತ್ಸೆ ಪಡೆದು ಮರಳಿದ್ದಾರೆ. ಇದು ಸಾಮಾನ್ಯ ವೈರಸ್. ಕೆಮ್ಮು, ಶೀತ, ಜ್ವರ ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು, ಹಿರಿಯರು ಎಚ್ಚರಿಕೆ ವಹಿಸಬೇಕು. ಹೆಚ್ಎಂಪಿ ವೈರಸ್ ಕುರಿತು ಜನ ಆತಂಕ ಪಡಬೇಕಿಲ್ಲ.
ಡಾ.ಧನಂಜಯ ಸರ್ಜಿ, ಮಕ್ಕಳ ತಜ್ಞ
ಚಿಕಿತ್ಸೆಗೆ ದಾಖಲಾಗಿದ್ದ ಮಕ್ಕಳ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಐವರಲ್ಲಿ ಹೆಚ್ಎಂಪಿ ಸೋಂಕು ತಗುಲಿರುವುದು ಗೊತ್ತಾಗಿತ್ತು. ಐವರು ಮಕ್ಕಳಿಗು ಚಿಕಿತ್ಸೆ ನೀಡಲಾಗಿದ್ದು ಗುಣವಾಗಿದ್ದಾರೆ ಎಂದು ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ » ಹುಲಿಕಲ್ ಘಾಟ್ನಲ್ಲಿ ಪ್ರಪಾತಕ್ಕೆ ಉರುಳಿದ ಬಸ್, ಆಗಿದ್ದೇನು?