GOOD NEWS | ಎಂಟು ತಿಂಗಳ ಬಳಿಕ ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ, ಸಭಾಂಗಣ ಫುಲ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 NOVEMBER 2020

ಕರೋನ, ಲಾಕ್‍ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ರಂಗ ಚಟುವಟಿಕೆ ಶಿವಮೊಗ್ಗದಲ್ಲಿ ಪುನಾರಂಭವಾಗಿದೆ. ಎಂಟು ತಿಂಗಳ ಬಳಿಕ ಮೊದಲ ನಾಟಕ ಪ್ರದರ್ಶನಕ್ಕೆ ರಂಗಾಸಕ್ತರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

Rangabhoomi Logo 200x200 1 1 1

ಯಾವುದು ಮೊದಲ ನಾಟಕ?

ಶಿವಮೊಗ್ಗ ರಂಗಾಯಣ ಸಭಾಂಗಣದಲ್ಲಿ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನವಾಯಿತು. ವೆಂಕಟರಮಣ ಐತಾಳ್ ಅವರು ನಿರ್ದೇಶಿಸಿರುವ ನಾಟಕದಲ್ಲಿ, ರಂಗಾಯಣದ ಈ ಸಾಲಿನ ರೆಪರ್ಟರಿ ಕಲಾವಿದರು ಅಭಿನಯಿಸಿದ್ದರು. ರಂಗಕರ್ಮಿ ಅ.ಚಿ.ಪ್ರಕಾಶ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ನಾಟಕ, ರೆಸ್ಪಾನ್ಸ್ ಹೇಗಿತ್ತು?

ಎರಡು ಗಂಟೆ ಅವಧಿಯ ನಾಟಕದಲ್ಲಿ ಚಾಣಕ್ಯನ ಚಾಣಾಕ್ಷತನವನ್ನು ಎಳೆ ಎಳೆಯಾಗಿ ಪ್ರಸ್ತುತಪಡಿಸಲಾಗಿದೆ. ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ನೆನಪಿಗೆ ತರುವ ಸನ್ನಿವೇಶಗಳು ಎದುರಾಗುತ್ತವೆ.

ಮೊದಲ ನಾಟಕಕ್ಕೆ ರಂಗಾಸಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಕೋವಿಡ್ ನಿಯಮದ ಹಿನ್ನೆಲೆ ಇಬ್ಬರ ನಡುವಿನ ಒಂದು ಸೀಟ್ ಬ್ಲಾಕ್ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಬಂದಿದ್ದರಿಂದ ಅನಿವಾರ್ಯವಾಗಿ ಹಲವರನ್ನು ಹಿಂದೆ ಕಳುಹಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.

VIDEO REPORT

ಇವತ್ತು ಮತ್ತೊಂದು ಪ್ರದರ್ಶನ

ಚಾಣಕ್ಯ ಪ್ರಪಂಚ ನಾಟಕದ ಎರಡನೆ ಪ್ರದರ್ಶನ ಸೋಮವಾರ ಸಂಜೆ 6 ಗಂಟೆಗೆ ಇರಲಿದೆ ಎಂದು ಸಂದೇಶ ಜವಳಿ ತಿಳಿಸಿದ್ದಾರೆ.

ರಂಗ ಸಮಾಜ ಸದಸ್ಯ ಹಾಲಸ್ವಾಮಿ, ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment