ಡಿವೈಎಸ್‌ಪಿಗಳ ವರ್ಗಾವಣೆ, ಜಿಲ್ಲೆಯಲ್ಲಿ ಯಾರೆಲ್ಲರ ವರ್ಗವಾಗಿದೆ? ತಿರುಮಲೇಶ್‌ ವರ್ಗಾವಣೆ ರದ್ದಾಗಿದ್ದೇಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 FEBRUARY 2024

SHIMOGA : ರಾಜ್ಯದ ವಿವಿಧೆಡೆಯ 13 ಡಿವೈಎಸ್‌ಪಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಪೈಕಿ ಶಿವಮೊಗ್ಗಕ್ಕೆ ವರ್ಗವಾಗಿದ್ದ ಡಿವೈಎಸ್‌ಪಿ ತಿರುಮಲೇಶ್‌ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ಇದು ತೀವ್ರ ಕುತೂಹಲ ಮೂಡಿಸಿದೆ.

ಜಿಲ್ಲೆಯಲ್ಲಿ ಯಾರೆಲ್ಲರ ವರ್ಗವಾಗಿದೆ?

ಶಿಕಾರಿಪುರ ಉಪ ವಲಯದ ಡಿವೈಎಸ್‌ಪಿ ಶಿವಾನಂದ ಎನ್.ಮದರಖಂಡಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಶಿವಮೊಗ್ಗ ಉಪ ವಿಭಾಗದ ವರ್ಗಾವಣೆ ಆದೇಶದಲ್ಲಿರುವ ಜೆ.ಜೆ.ತಿರುಮಲೇಶ್‌ ಅವರ ವರ್ಗಾವಣೆ ಆದೇಶ ರದ್ದುಗೊಳಿಸಲಾಗಿದೆ. ಅವರನ್ನು ಕರ್ನಾಟಕ ಲೋಕಾಯುಕ್ತದಲ್ಲಿಯೇ ಮುಂದುವರೆಸಲಾಗಿದೆ.

ರಾಜ್ಯ ಗುಪ್ತವಾರ್ತೆಯಲ್ಲಿದ್ದ ಡಿವೈಎಸ್‌ಪಿ ಬಾಬು ಆಂಜನಪ್ಪ ಅವರನ್ನು ಶಿವಮೊಗ್ಗ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಅದೇಶದಲ್ಲಿದ್ದ ಕೇಶವ.ಕೆ.ಇ ಅವರನ್ನು ಶಿಕಾರಿಪುರ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ತಿರುಮಲೇಶ್‌ ವರ್ಗ ರದ್ದು, ಚರ್ಚೆ

ಲೋಕಾಯುಕ್ತದಲ್ಲಿ ಡಿವೈಎಸ್‌ಪಿ ಆಗಿರುವ ಜೆ.ಜೆ.ತಿರುಮಲೇಶ್‌ ಅವರನ್ನು ಕಳೆದ ಎರಡು ದಿನದ ಹಿಂದೆ ಶಿವಮೊಗ್ಗ ಉಪ ವಿಭಾಗದ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ದಿಢೀರ್‌ ಬೆಳವಣಿಗೆಯಲ್ಲಿ ಜೆ.ಜೆ.ತಿರುಮಲೇಶ್‌ ಅವರ ವರ್ಗಾವಣೆ ರದ್ದುಗೊಳಿಸಲಾಗಿದೆ. ಇದು ಪೊಲೀಸ್‌ ಇಲಾಖೆ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಕಾರಣಕ್ಕಾಗಿ ಅವರ ವರ್ಗಾವಣೆ ರದ್ದುಗೊಳಿಸಲಾಗಿದೆ ಎಂಬ ಚರ್ಚೆ ಶುರುವಾಗಿದೆ. ತಿರುಮಲೇಶ್‌ ಅವರು ಈ ಹಿಂದೆ ಭದ್ರಾವತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಇದನ್ನೂ ಓದಿ – ಸರ್ಕಲ್‌ನಲ್ಲಿ ರಾಶಿ ರಾಶಿ ಹಾಫ್‌ ಹೆಲ್ಮೆಟ್‌, ಕರ್ಕಶ ಶಬ್ದದ ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಶಿವಮೊಗ್ಗ ಪೊಲೀಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment