ಫೇಸ್’ಬುಕ್ಕಲ್ಲಿ ಬಿಸಿ ಬಿಸಿ ಚರ್ಚೆ, ‘ಹರ್ಷ ಕುಟುಂಬದವರಿಗೆ ಎಂಎಲ್ಎ ಟಿಕೆಟ್’ಗೆ ಆಗ್ರಹ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಫೆಬ್ರವರಿ 2022

ಬಜರಂಗದಳ ಕಾರ್ಯಕರ್ತ ಹರ್ಷ ಅವರ ತಾಯಿಗೆ ಶಿವಮೊಗ್ಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಫೇಸ್ ಬುಕ್’ನಲ್ಲಿ ಇದರ ಕುರಿತು ಅಭಿಪ್ರಾಯ ಸಂಗ್ರಹ ಕೂಡ ನಡೆಯುತ್ತಿದೆ.

Shimoga Nanjappa Hospital Testing List

ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹರ್ಷ ಪ್ರಾಣ ಕಳೆದುಕೊಂಡಿದ್ದಾರೆ. ಹಿಂದುತ್ವಕ್ಕಾಗಿ ಹೋರಾಟ ನಡೆಸಿದವರನ್ನು ಚುನಾವಣೆಗೆ ನಿಲ್ಲಿಸಬೇಕು. ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹರ್ಷ ಅವರ ತಾಯಿ ಪದ್ಮಾ ಅವರಿಗೆ ಟಿಕೆಟ್ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಕೆಲವು ಮಾಧ್ಯಮ ಸಂಸ್ಥೆಗಳು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಭಿಪ್ರಾಯ ಸಂಗ್ರಹ ಆರಂಭಿಸಿವೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಹರ್ಷ ಅವರ ಕುಟುಂಬದವರು ನೆಮ್ಮೆಯಿಂದ ಇರಲು ಅವಕಾಶ ಮಾಡಿಕೊಡಿ. ರಾಜಕೀಯದಿಂದ ಮತ್ತಷ್ಟು ನೋವು ಅನುಭವಿಸುವುದು ಬೇಡ’ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು, ‘ಹಿಂದುತ್ವದ ಶಕ್ತಿ ಪ್ರದರ್ಶನವಾಗಲಿ. ಹರ್ಷನ ಸಾವಿಗೆ ನ್ಯಾಯ ಸಿಗುವಂತಾಗಲಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಹರ್ಷ ಹತ್ಯೆ ಕೇಸ್, ಭದ್ರಾವತಿಯ ಒಬ್ಬ ಸೇರಿ ಇಬ್ಬರು ಅರೆಸ್ಟ್

AVvXsEimUJzitySHdAa28LH WjsG5MOhuhzWinMbHt21roIt3k0yffFhF5AGasxiN6LlJpFhuBOStxXmoauEjPGwXp4FoJp7uRmvychnkHw3wc2L2H7wSVv8Cd91ZsowSu4mxbfGNS95yLdHTDSRKFOnXuePD t0QEiGqNOlMC3jqgfTgYa26YJb0VaNGg kgw=s926

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment