ಶಿವಮೊಗ್ಗ ಲೈವ್.ಕಾಂ | SHIMOGA NEWS | 24 JANUARY 2021
ಗಾಂಧಿ ಬಜಾರ್ನ ನಾವೆಲ್ಟಿ ಶಾಪ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕಿಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ.
ಈಗ ಹೇಗಿದೆ ಪರಿಸ್ಥಿತಿ?
ಕನ್ನಿಕಾ ಪರಮೇಶ್ವರಿ ದೇಗುಲದ ಮುಂದೆ ಇರುವ ಮಾತಾಶ್ರೀ ನಾವೆಲ್ಟಿ ಸೆಂಟರ್ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಂಗಡಿಯಲ್ಲಿ ಸೌಂದರ್ಯವರ್ಧಕಗಳು ಇದ್ದಿದ್ದರಿಂದ ಬೆಂಕಿ ತೀವ್ರ ಸ್ವರೂಪದಲ್ಲಿ ವ್ಯಾಪಿಸಿತ್ತು. ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ಇಡೀ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ.
ಅಕ್ಕಪಕ್ಕದ ಕಟ್ಟಡಗಳಿಗೂ ಬಿಸಿ
ಬೆಂಕಿಯ ಪರಿಣಾಮ ಅಕ್ಕಪಕ್ಕದ ಕಟ್ಟಡಗಳಿಗೂ ಬಿಸಿ ತಟ್ಟಿದೆ. ಮಾತಾಶ್ರೀ ನಾವೆಲ್ಟಿ ಪಕ್ಕದ ಕಟ್ಟಡದಲ್ಲಿ ಮನೆಗಳಿವೆ. ರಾತ್ರಿ ಆ ಮನೆಗಳಲ್ಲಿ ಇದ್ದವರು ಆತಂಕದಿಂದ ಹೊರಗೆ ಬಂದಿದ್ದರು. ಇನ್ನು ಮತ್ತೊಂದು ಕಡೆ ಹಳೆಯ ಕಟ್ಟಡವಿದ್ದು, ಮಳಿಗೆಗಳಿವೆ. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಬಹುದು ಎಂಬ ಆತಂಕವಿತ್ತು.
ಇದನ್ನೂ ಓದಿ | ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಭಾರಿ ಅಗ್ನಿ ಅವಘಡ
ಪ್ರವಾಸಕ್ಕೆ ಹೊರಟವರು ಗಮನಿಸಿದರು
ಪ್ರವಾಸಕ್ಕೆ ಹೊರಟಿದ್ದ ಶಿವಮೊಗ್ಗದ ನರೇಂದ್ರ ಅವರು ಹೊಗೆ ಗಮನಿಸಿದ್ದಾರೆ. ಸ್ಥಳೀಯರನ್ನು ಎಚ್ಚರಿಸಿ, ನಾವೆಲ್ಟಿ ಶಾಪ್ನ ಮಾಲೀಕರನ್ನು ಕರೆಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಕಿ ಆರಿಸಲು ಸ್ಥಳೀಯರ ಯತ್ನ
ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಅಕ್ಕಪಕ್ಕದ ಮನೆಗಳಿಂದ ಬಕೆಟ್ನಲ್ಲಿ ನೀರು ತಂದು ಸುರಿಯಲಾಯಿತು. ಆದರೆ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಮಳಿಗೆಯ ಒಳಗಿದ್ದ ಸೌಂದರ್ಯವರ್ಧಕಗಳು ಬೆಂಕಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು. ಅಂಗಡಿಯ ಹಿಂಭಾಗದಲ್ಲೂ ಬೆಂಕಿಯ ಕೆನ್ನಾಲಗೆ ಕಾಣಿಸುತ್ತಿತ್ತು.
ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ
ಮಳಿಗೆಯಲ್ಲಿ ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಂಗಡಿಯ ರೋಲಿಂಗ್ ಶಟರ್ ನೀರು ಒಳಗೆ ಹೋಗದಂತೆ ತಡೆಯುತ್ತಿತ್ತು. ಜೀವದ ಹಂಗು ತೊರೆದು ರೋಲಿಂಗ್ ಶಟರ್ ಸರಿಸಿ, ನೀರು ಹಾಯಿಸಲಾಯಿತು. ಒಂದರ ಹಿಂದೆ ಒಂದು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿದವು. ಅಗ್ನಿಶಾಮಕ ಇಲಾಖೆ ಡಿಎಫ್ಒ ಅಶೋಕ್ ಕುಮಾರ್ ಅವರು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಗಾಂಧಿ ಬಜಾರ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಬೆಳಗ್ಗೆಯಿಂದ ಜನರು ಮಳಿಗೆ ಬಳಿಗೆ ಬಂದು ಆತಂಕ, ಕುತೂಹಲದಿಂದ ಗಮನಿಸುತ್ತಿದ್ದಾರೆ.
VIDEO REPORT
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200