| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ ಲೈವ್.ಕಾಂ | SHIMOGA | 28 ಜನವರಿ 2020

ಸಿಟಿಯ ಪ್ರಮುಖ ಜಾಗದಲ್ಲಿರುವ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್, ಈಗ ಗುಂಡು ಹಾಕೋರಿಗೆ, ಧಮ್ಮು ಎಳೆಯೋರಿಗೆ ಅಡ್ಡೆಯಾಗಿದೆ. ಮಹಾನಗರ ಪಾಲಿಕೆ ಕಚೇರಿ ಸಮೀಪದಲ್ಲೇ ಈ ಚಟುವಟಿಕೆಗಳು ನಡೆಯುತ್ತಿದ್ದರು, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸ.

ಶಿವಮೊಗ್ಗದ ಗೋಪಿ ಸರ್ಕಲ್ ಬಳಿ ಇರುವ ದೇವರಾಜ ಅರಸು ಕಾಂಪ್ಲೆಸ್ ಒಳಭಾಗ, ಮದ್ಯಪಾನಿಗಳಿಗೆ ಫೇವರೆಟ್ ಲೊಕೇಷನ್ ಆಗಿದೆ. ಗೇಟು ದಾಟಿ ಒಳಗೆ ಕಾಲಿಟ್ಟರೆ, ಮದ್ಯದ ಬಾಟಲಿ, ಪ್ಯಾಕೆಟ್’ಗಳೇ ಕಾಣ್ಣಿಗೆ ಬೀಳುತ್ತವೆ. ಗುಟ್ಕಾ ಪ್ಯಾಕೆಟ್’ಗಳು, ಸಿಗರೇಟುಗಳು ಕಾಣಸಿಗುತ್ತವೆ.
ದೇವರಾಜ ಅರಸು ಕಾಂಪ್ಲೆಕ್ಸ್’ನಲ್ಲಿ ಮಳಿಗೆಗಳು ಬಂದ್ ಆಗಿವೆ. ಬಾಡಿಗೆ ಕಾರಣಕ್ಕೆ ತಕರಾರು ಸೃಷ್ಟಿಯಾಗಿ, ಇಲ್ಲಿರುವ ಎಲ್ಲ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದೆ. ಮಹಾನಗರ ಪಾಲಿಕೆಯೆ ಮಳಿಗೆಗಳಿಗೆ ಬೀಗ ಜಡಿದು, ಸೀಲ್ ಮಾಡಿದೆ. ಹಾಗಾಗಿ ಈ ಕಾಂಪ್ಲೆಕ್ಸ್’ನಲ್ಲಿ ಜನರಿರುವುದಿಲ್ಲ.
‘ಬೆಳಗಿನ ಹೊತ್ತು ಕಾಂಪ್ಲೆಕ್ಸ್’ನಲ್ಲಿ ವಾಹನಗಳ ಪಾರ್ಕಿಂಗ್ ಇರುತ್ತದೆ. ಜನ ಓಡಾಡುತ್ತಿರುತ್ತಾರೆ. ಕತ್ತಲದ ಮೇಲೆ ಯಾರು ಬಂದು ಹೋಗುವರು ತಿಳಿಯುವುದಿಲ್ಲ. ಕೆಲವೊಮ್ಮೆ ಬಾಟಿಲಿಗಳನ್ನು ಒಡೆದು ಹೋಗಿದ್ದು ಇದೆ.’ ಅಂತಾರೆ ಕಾಂಪ್ಲೆಕ್ಸ್ ಸನಿಹದಲ್ಲಿ ಮಳಿಗೆ ಹೊಂದಿರುವ ವ್ಯಾಪಾರಿ.

ದೇವರಾಜ ಅರಸು ಕಾಂಪ್ಲೆಕ್ಸ್ ಪ್ರವೇಶಕ್ಕೆ ಎರಡು ಗೇಟುಗಳಿವೆ. ಗೋಪಿ ಸರ್ಕಲ್’ ಕಡೆಯಿಂದ ಒಂದು ಗೇಟು, ಕಸ್ತೂರಬಾ ಕಾಲೇಜಿಗೆ ಹೋಗುವ ರಸ್ತೆಯ ಕಡೆಯಿಂದ ಮತ್ತೊಂದು ಗೇಟಿದೆ. ಮಳಿಗೆಗಳು ಇದ್ದಾಗ ರಾತ್ರಿ ಗೇಟುಗಳನ್ನು ಬಂದ್ ಮಾಡಲಾಗುತ್ತಿತ್ತು. ಆದರೆ ಈಗ ಗೇಟುಗಳು ಸದಾ ತೆರೆದಿರುತ್ತದೆ. ಪಾಲಿಕೆ ಕಾಂಪ್ಲೆಕ್ಸ್’ಗೆ ಭದ್ರತೆಯೆ ಇಲ್ಲದೆ ಇರುವುದರಿಂದ, ಮದ್ಯವ್ಯಸಿನಿಗಳು, ಸಿಗರೇಟು ಸೇದುವವರಿಗೆ ಪ್ರಶಸ್ತ ಸ್ಥಳವಾಗಿದೆ. ಅಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಆರೋಪಿಸಲಾಗುತ್ತಿದೆ.



ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()