SHIMOGA | ಗಾಡಿಕೊಪ್ಪ ಸಮೀಪ ಸಾಗರ ರಸ್ತೆಯಲ್ಲಿ ಹೆದ್ದಾರಿ ತಡೆ, ಒಂದು ಗಂಟೆ ರಸ್ತೆಯಲ್ಲೇ ಕುಳಿತ ರೈತರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲೂ ರೈತರು ಹೆದ್ದಾರಿ ತಡೆದ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗಾಡಿಕೊಪ್ಪದಲ್ಲಿ ಸಾಗರ ರಸ್ತೆಯಲ್ಲಿ ಹೆದ್ದಾರಿ ತಡೆ ಚಳವಳಿ ನಡೆಸಲಾಯಿತು. ಸುಮಾರು ಒಂದು ಗಂಟೆ ಚಳವಳಿ ನಡೆಯಿತು.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಬೆಂಬಲವಾಗಿ ಶಿವಮೊಗ್ಗ ಜಿಲ್ಲೆಯಲ್ಲೂ ಹೆದ್ದಾರಿ ತಡೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು, ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್‍.ಆರ್.ಬಸವರಾಜಪ್ಪ, ದೆಹಯಲಿಯಲ್ಲಿ 75 ದಿನಗಳಿಂದ ಹೋರಾಟ ನಡೆಯುತ್ತಿದೆ. ಹೋರಾಟ ಶಾಂತಿಯುತವಾಗಿದೆ. ಈಗ ಚಳವಳಿಗಾರರ ಸುತ್ತಲು ಕಾಂಕ್ರಿಟ್ ಹಾಕಿ, ಮೊಳೆ ನೆಡೆಸಿ, ತಂತಿ ಬೇಲಿ ಹಾಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ಮಾತನಾಡಿ, ಕೇಂದ್ರ ಸರ್ಕಾರ ಈಗ ಐಸಿಯು ಸೇರಿದೆ. ರೈತರ ವಿರೋಧ ಕಟ್ಟಿಕೊಂಡು ಐಸಿಯುನಿಂದ ಹೊರಬರುವ ಸಾಧ್ಯತೆ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರದ ಕೊನೆ ದಿನಗಳು ಆರಂಭವಾಗಿವೆ ಎಂದರು.

ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳು ಹೆದ್ದಾರಿ ತಡೆಗೆ ಬೆಂಬಲ ಸೂಚಿಸಿದ್ದವು.

ಆಂಬುಲೆನ್ಸ್‌ಗೆ ಮಾತ್ರ ದಾರಿ

ಹೆದ್ದಾರಿ ತಡೆ ವೇಳೆ ಆಂಬುಲೆನ್ಸ್‍ಗಳಿಗೆ ರೈತರು ದಾರಿ ಬಿಟ್ಟುಕೊಟ್ಟು ಮಾದರಿಯಾದರು. ಸಾಗರ ರಸ್ತೆಯಲ್ಲಿ ಕೆಲವು ಆಸ್ಪತ್ರೆಗಳಿವೆ. ಇಲ್ಲಿಗೆ ತೆರಳುವ ರೋಗಿಗಳಿಗೆ ಅನುಕೂಲ ಮಾಡಿಕೊಡಲಾಯಿತು. ಹೆದ್ದಾರಿ ತಡೆ ವೇಳೆ ಏಳೆಂಟು ಆಂಬುಲೆನ್ಸ್‍ಗಳು ಆ ಮಾರ್ಗದಲ್ಲಿ ಹೋದವು.

ರಸ್ತೆ ಮಾರ್ಗ ಬದಲಿಸಿದ ಪೊಲೀಸ್

ಸಾಗರ ರಸ್ತೆಯ ತುಂಗಾ ಚಾನೆಲ್ ಸೇತುವೆ ಬಳಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ  ಗಾಡಿಗೊಪ್ಪ ಬಳಿಯಲ್ಲೇ ವಾಹನಗಳ ಮಾರ್ಗ ಬದಲಿಸಲಾಗಿತ್ತು. ಗಾಡಿಕೊಪ್ಪದ ಮೂಲಕ ಪರ್ಯಾಯ ಮಾರ್ಗದಲ್ಲಿ ಸಾಗರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

145027163 1323100194718064 6203198686784850770 n.jpg? nc cat=110&ccb=2& nc sid=8bfeb9& nc ohc=vunj4UsYGcMAX eEGrU& nc ht=scontent.fblr4 1

146721388 1323100218051395 8106937613407486331 n.jpg? nc cat=111&ccb=2& nc sid=8bfeb9& nc ohc=0PR0LzdOKJsAX98rPCT& nc ht=scontent.fblr4 2

147330060 1323100248051392 9129491852083856160 n.jpg? nc cat=104&ccb=2& nc sid=8bfeb9& nc ohc=PlvgOuYbjUwAX8wC6fz& nc oc=AQkgiJUbaxkA8w4O3y1yZBIRB6LCkO xGenSkJKITeDJ2F NgC2XSB5o021yaYcyWlsBNYptg 3jNHbhCqfJ bgp& nc ht=scontent.fblr4 3

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment