ನೂರು ದಿನ ಕಳೆದರು ಉಪನ್ಯಾಸಕರ ಖಾತೆಗೆ ಬಾರದ ಗೌರವಧನ, ಕುವೆಂಪು ವಿವಿ ವಿರುದ್ಧ ಅಸಮಾಧಾನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS | 8 JANUARY 2024

SHIMOGA : ಕುವೆಂಪು ವಿಶ್ವವಿದ್ಯಾಲಯದ ಕಳೆದ ಸೆಮಿಸ್ಟರ್‌ನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದು, ಫಲಿತಾಂಶ ಪ್ರಕಟವಾಗಿ ನೂರು ದಿನ ಕಳೆದರು ಮೌಲ್ಯಮಾಪನ ಮಾಡಿದ ಉಪನ್ಯಾಸರಿಗೆ ಗೌರವಧನ ಪಾವತಿಯಾಗಿಲ್ಲ. ಈ ಸಂಬಂಧ ಉಪನ್ಯಾಸಕರು ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತದೆ. ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡ ಉಪನ್ಯಾಸಕರಿಗೆ ಪ್ರತಿ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಇಂತಿಷ್ಟು ಎಂದು ಗೌರವ ಧನ ನೀಡಲಾಗುತ್ತದೆ.

ಆಯಾ ದಿನವೇ ಪಾವತಿಯಾಗುತ್ತಿತ್ತು

ಈ ಹಿಂದೆ ಮೌಲ್ಯಮಾಪನ ಮುಗಿದ ದಿನವೇ ಉಪನ್ಯಾಸರಿಗೆ ನಗದು ರೂಪದಲ್ಲಿ ಗೌರವ ಧನ ಪಾವತಿಯಾಗುತ್ತಿತ್ತು. ಇದರಿಂದ ಕಡಿಮೆ ವೇತನ ಪಡೆಯುವ ಅತಿಥಿ ಉಪನ್ಯಾಸಕರಿಗೆ ಅನುಕೂಲವಾಗುತ್ತಿತ್ತು. ಆದರೆ ಈಚೆಗೆ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿ ಪ್ರಕ್ರಿಯೆ ಆರಂಭವಾಗಿದ್ದು ಸಮಸ್ಯೆ ಶುರುವಾಗಿದೆ ಎಂದು ಉಪನ್ಯಾಸಕರು ಆರೋಪಿಸುತ್ತಾರೆ.

ಕುವೆಂಪು ವಿವಿ ಹೇಳುವುದೇನು?

ಈ ಸಂಬಂಧ ಕುವೆಂಪು ವಿಶ್ವವಿದ್ಯಾಲದಯ ಪರೀಕ್ಷಾಂಗ ಕುಲಸಚಿವ ಎಸ್‌.ಎಂ.ಗೋಪಿನಾಥ್‌ ಅವರನ್ನು ಸಂಪರ್ಕಿಸಿದಾಗ, ಯಾವ ಉಪನ್ಯಾಸಕರು ಎಷ್ಟು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ ಎಂದು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತದೆ. ಕೆಲವೊಮ್ಮೆ ಕಣ್ತಪ್ಪಿನಿಂದ ದತ್ತಾಂಶ ತಪ್ಪಾಗುತ್ತದೆ. ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಮೊದಲೆ ದಾಖಲಾಗಿರುವ ದತ್ತಾಂಶ ಮತ್ತು ಮೌಲ್ಯಮಾಪನದ ಸಂದರ್ಭ ದಾಖಲಾದ ದತ್ತಾಂಶದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಆಗ ಪುನರ್‌ ಪರಿಶೀಲನೆ ನಡೆಸಲಾಗುತ್ತದೆ. ಇದು ಅತ್ಯಂತ ದೀರ್ಘ ಕೆಲಸ. ಇನ್ನೆರಡು ಬ್ಯಾಂಕಿಂಗ್‌ ದಿನದಲ್ಲಿ ಉಪನ್ಯಾಸಕರಿಗೆ ಗೌರವಧನ ಪಾವತಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ – ಎಚ್ಚೆತ್ತುಕೊಳ್ಳದಿದ್ದರೆ ಗಾಡಿಕೊಪ್ಪದಲ್ಲಿ ಮತ್ತಷ್ಟು ಅವಘಡ ನಿಶ್ಚಿತ, ಮೈ ಜುಮ್‌ ಅನಿಸುತ್ತೆ ಸಿಸಿಟಿವಿ ದೃಶ್ಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 8, 2024

Leave a Comment