ಜಮೀನಿನಲ್ಲಿ ಸಿಕ್ತು ರಾಶಿಗಟ್ಟಲೆ ಚಿನ್ನದ ಸರಗಳು, ಮೂಟೆಯಲ್ಲಿ ತಂದು ಮಾರಾಟ, ಆಮೇಲೆ ಆಗಿದ್ದೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 14 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಜಮೀನು ಕೆಲಸ ಮಾಡುವಾಗ ರಾಶಿಗಟ್ಟಲೆ ಚಿನ್ನದ ಸರಗಳು ಪತ್ತೆಯಾಗಿವೆ. ಅದನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ, ಎನ್‌.ಆರ್‌.ಪುರದ ವ್ಯಕ್ತಿಯೊಬ್ಬರಿಗೆ ನಕಲಿ ಸರಗಳನ್ನು ನೀಡಿ 15 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಹಣ ಪಡೆದು ಮೋಸ ಮಾಡಲಾಗಿದೆ.

‘ಒರಿಸ್ಸಾದಿಂದ ರಸ್ತೆ ಕೆಲಸಕ್ಕೆ ಬಂದಿದ್ದೆ’

ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) ಎನ್‌.ಆರ್‌.ಪುರದಲ್ಲಿ ಒರಿಸ್ಸಾ ಮೂಲದವ ಎಂದು ಹೇಳಿಕೊಂಡು ಕಿರಣ್‌ ಎಂಬಾತನ ಪರಿಚಯವಾಗಿತ್ತು. ಜಮೀನು ಒಂದರಲ್ಲಿ ಕೆಲಸ ಮಾಡುವಾಗ ಬಂಗಾರದ ಸರಗಳು ಸಿಕ್ಕಿವೆ ಎಂದು ಕಿರಣ್‌ ನಂಬಿಸಿದ್ದ. ಸಾಕ್ಷಿಯಾಗಿ ಒಂದು ಚಿನ್ನದ ಸರವನ್ನು ತೋರಿಸಿ, ಅದರ ಸ್ವಲ್ಪ ಭಾಗವನ್ನು ತುಂಡು ಮಾಡಿ ಎನ್‌.ಆರ್‌.ಪುರದ ವ್ಯಕ್ತಿಗೆ ನೀಡಿದ್ದ. ಪರೀಕ್ಷಿಸಿದಾಗ ಅದು ಅಸಲಿ ಚಿನ್ನ ಎಂದು ತಿಳಿದು ಬಂದಿತ್ತು.

30 ಲಕ್ಷಕ್ಕೆ ಬೇಡಿಕೆ, 15 ಲಕ್ಷಕ್ಕೆ ವ್ಯವಹಾರ

ಎನ್‌.ಆರ್‌.ಪುರದ ವ್ಯಕ್ತಿಗೆ ಕರೆ ಮಾಡಿದ ಕಿರಣ್‌, ಅಷ್ಟೂ ಚಿನ್ನದ ಸರಗಳನ್ನು ಮಾರಾಟ ಮಾಡಬೇಕಿದೆ. ತಾನೀಗ ಶಿವಮೊಗ್ಗದಲ್ಲಿರುವುದಾಗಿ ತಿಳಿಸಿದ್ದ. ಮೊದಲಿಗೆ 30 ಲಕ್ಷ ರೂ. ಕೇಳಿದ್ದ ವಂಚಕ ಕಿರಣ್‌, ಕೊನೆಗೆ 15 ಲಕ್ಷ ರೂ.ಗೆ ವ್ಯವಹಾರ ಮಾಡಲು ಒಪ್ಪಿಕೊಂಡಿದ್ದ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಸಮೀಪ ಕಾರಿನಲ್ಲಿ ಕುಳಿತು ಎನ್‌.ಆರ್‌.ಪುರದ ವ್ಯಕ್ತಿಗೆ ಚಿನ್ನದ ಸರಗಳಿದ್ದ ಚೀಲ ನೀಡಿದ್ದ. ಅವರಿಂದ 15 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ.

ಎನ್‌.ಆರ್‌.ಪುರದ ವ್ಯಕ್ತಿ ಸಮೀಪದ ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವು ನಕಲಿ ಚಿನ್ನ ಅನ್ನುವುದು ಗೊತ್ತಾಗಿದೆ. ಈ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ದಾಳಿ, ಪಾತ್ರೆ ಸಹಿತ ಆರೋಪಿಗಳು ಅರೆಸ್ಟ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment