ಶಿವಮೊಗ್ಗ: ಇ-ಆಸ್ತಿ (E Aasthi) ಪಡೆಯಲು ಇರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಏರ್ಪಡಿಸಲಾಗಿತ್ತು.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕೇವಲ 20,251 ಇ-ಆಸ್ತಿ ಮಾತ್ರ ನೀಡಲಾಗಿದೆ. ಭದ್ರಾವತಿಯಲ್ಲಿ 29,900 ಕೊಟ್ಟಿದ್ದಾರೆ. ತುಮಕೂರು, ಹುಬ್ಬಳ್ಳಿಯ ಅಂಕಿ ಅಂಶ ನೋಡಿದರೆ ಶಿವಮೊಗ್ಗ ಬಹಳ ಹಿಂದಿದೆ.
- ಕೆ.ವಿ.ವಸಂತ ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ
![]()
ಈ ಸಂದರ್ಭ ಅಹವಾಲು ಆಲಿಸಿದ ಪಾಲಿಕೆ ಕಮಿಷನರ್ ಮಯಾಣ್ಣಗೌಡ ಪ್ರಮುಖ ನಿರ್ಧಾರ ಪ್ರಕಟಿಸಿದರು.
ಆಯುಕ್ತ ಮಾಯಣ್ಣಗೌಡ ಏನೆಲ್ಲ ಹೇಳಿದರು?

ದಸರಾ ಬಳಿಕ ಸಾರ್ವಜನಿಕರೇ ನೇರವಾಗಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಇ-ಆಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಇದುವರೆಗೆ 21 ಸಾವಿರ ಇ-ಆಸ್ತಿ ಗಳನ್ನು ನೀಡಲಾಗಿದೆ. ವಾರಕ್ಕೆ 1 ಸಾವಿರ ಇ-ಆಸ್ತಿಗಳನ್ನು ಕೊಡಲಾಗುತ್ತಿದೆ.
ಮುಂಚಿನದ್ದಕ್ಕೆ ಹೋಲಿಸಿದರೆ ಪರಿಸ್ಥಿತಿ ಸುಧಾರಣೆಯಾಗಿದೆ. ಇ-ಆಸ್ತಿಯನ್ನು ಇನ್ನಷ್ಟು ಶೀಘ್ರವಾಗಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ದಸರಾ, ಗಣೇಶ ಹಬ್ಬದ ಹಿನ್ನೆಲೆ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಕೆಲಸ ಅಧಿಕವಾಗಿ ಇದ್ದುದ್ದರಿಂದ ಸ್ವಲ್ಪ ಕಷ್ಟವಾಗಿದೆ.
ಪ್ರಮುಖರಾದ ಸತೀಶ್ ಕುಮಾರ್ ಶೆಟ್ಟಿ, ಗೋಪಾಲ್, ಸೀತಾರಾಮ್, ಕೆ.ವಿ. ವಸಂತಕುಮಾರ್, ಜನಮೇಜಿ ರಾವ್ ಇತರರಿದ್ದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಸಂಸದರು ಗರಂ, ಇಲ್ಲಿದೆ ರಾಘವೇಂದ್ರ ಹೇಳಿಕೆಯ ಪಾಯಿಂಟ್ಸ್
meeting about E Aasthi
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





