SHIMOGA NEWS, 18 OCTOBER 2024 : ಜಿಲ್ಲಾ ಉಸ್ತುವಾರಿ (Minister) ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅ.19ರಂದು ಬೆಳಗ್ಗೆ 5 ಗಂಟೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 9.45ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ದುರ್ಗಿಗುಡಿಯ ಪಾರ್ಕ್ ಎಕ್ಸ್ಟೆನ್ಷನ್ನಲ್ಲಿರುವ ಹೊಯ್ಸಳ ಫೌಂಡೇಶನ್ನಲ್ಲಿ ನಿರ್ಮಲ ತುಂಗಾ ಅಭಿಯಾನ ಮತ್ತು ಪರಿಸರಾಸಕ್ತರ ಜೊತೆಗೆ ನಿರ್ಮಲಾ ತುಂಗಾ ಅಭಿಯಾನದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಚಿವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ » ಸಚಿವ ಮಧು ಬಂಗಾರಪ್ಪ ಕಚೇರಿ ಸಂಪರ್ಕ ಈಗ ಮತ್ತಷ್ಟು ಸುಲಭ
ಬೆಳಗ್ಗೆ 11.30ಕ್ಕೆ ನವುಲೆಯಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಲೋಕೋಪಯೋಗಿ ಭವನದಲ್ಲಿ ಸಹಕಾರ ಇಲಾಖೆ, ಮ್ಯಾಮ್ಕೋಸ್ ಮತ್ತು ಇತರೆ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
