ಶಿವಮೊಗ್ಗದಲ್ಲಿ ಸಿಟಿಯಲ್ಲಿ ಅಧಿಕಾರಿಗಳ ದಾಳಿ, ಲೋಡ್‌ಗಟ್ಟಲೆ ಮರಳು ವಶಕ್ಕೆ

ಶಿವಮೊಗ್ಗ : ರಾಗಿಗುಡ್ಡ ಸಮೀಪದ ಕುವೆಂಪು ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 25 ಲೋಡ್ ಮರಳನ್ನು (Sand) ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ » ಡಾಕ್ಟರ್‌ಗೆ ಆಸೆ ಮೂಡಿಸಿತು ಫೇಸ್‌ಬುಕ್‌ ಪೋಸ್ಟ್‌, ನಂಬಿ ಕ್ಲಿಕ್‌ ಮಾಡಿದ್ಮೇಲೆ ಕಾದಿತ್ತು ಬಿಗ್‌ ಶಾಕ್‌, ಕೋಟಿ ಕೋಟಿ ಮೋಸ

ಕುವೆಂಪುನಗರದ ಖಾಲಿ ನಿವೇಶನವೊಂದರಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಲೋಡ್‌ಗಟ್ಟಲೆ ಮರಳು ಪತ್ತೆಯಾಗಿದೆ.

ತಹಸೀಲ್ದಾರ್ ರಾಜೀವ್, ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

officials-raid-at-kuvempu-nagara-sand-mafia

ಇದನ್ನೂ ಓದಿ » ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದ ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದೆ ವಿಡಿಯೋದಲ್ಲಿ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
officials-raid-at-kuvempu-nagara-sand-mafia

Leave a Comment