ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022
ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶಿವಮೊಗ್ಗ ನಗರದಲ್ಲಿ ಇವತ್ತು ಪೊಲೀಸ್ ಇಲಾಖೆ ವತಿಯಿಂದ ರೂಟ್ ಮಾರ್ಚ್ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಯಿತು.
ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಡಿಎಆರ್ ತುಕಡಿ, ಕೆ.ಎಸ್.ಆರ್.ಪಿ ತುಕಡಿ ರೂಟ್ ಮಾರ್ಚ್’ನಲ್ಲಿ ಪಾಲ್ಗೊಂಡಿದ್ದವು.
ಶಿವಮೊಗ್ಗ ನಗರದ ಮಿಳ್ಳಘಟ್ಟ ಕ್ರಾಸ್ ನಿಂದ ರೂಟ್ ಮಾರ್ಚ್ ಪ್ರಾರಂಭವಾಯಿತು. ಅಣ್ಣಾ ನಗರ, ಟಿಪ್ಪು ನಗರ ಚಾನೆಲ್ ಏರಿಯಾ, ಪದ್ಮಾ ಟಾಕೀಸ್, ಜೆ.ಪಿ ನಗರದಿಂದ ನೇತಾಜಿ ಸರ್ಕಲ್, ಆಯನೂರು ಗೇಟ್ ಮುಖಾಂತರ ಬಿ.ಹೆಚ್.ರಸ್ತೆಯಿಂದ ಅಮೀರ್ ಅಹಮ್ಮದ್ ಸರ್ಕಲ್ ಮುಖಾಂತರ ಗಾಂಧಿ ಬಜಾರ್, ಎಂಕೆಕೆ ರಸ್ತೆ, ಲಷ್ಕರ್ ಮೊಹಲ್ಲಾ ನಂತರ ಬಿ. ಹೆಚ್ ರಸ್ತೆ ಮೂಲಕ ಡಿಎಆರ್ ಪೊಲೀಸ್ ಮೈದಾನದವರೆಗೆ ರೂಟ್ ಮಾರ್ಚ್ ನಡೆಯಿತು.
ಇದನ್ನೂ ಓದಿ | ಹಿಜಾಬ್, ಕೇಸರಿ ಶಾಲು ವಿವಾದ, ಮಂಗಳವಾರ ಜಿಲ್ಲೆಯ ಯಾವ್ಯಾವ ಕಾಲೇಜಿನಲ್ಲಿ ಏನೇನಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200