SHIVAMOGGA LIVE NEWS | 17 MARCH 2024
SHIMOGA : ವರ್ಷಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಗುಂಡಿಗಳೆಲ್ಲ ಪ್ರಧಾನಿ ಭೇಟಿ ಹಿನ್ನೆಲೆ ಬಂದ್ ಆಗಿವೆ. ಜನರು ಹಲವು ಬಾರಿ ಬೇಡಿಕೊಂಡರೂ ಗುಂಡಿ ಮುಚ್ಚಿಸದ ಅಧಿಕಾರಿಗಳು ಈಗ ತರಾತುರಿಯಲ್ಲಿ ಡಾಂಬಾರು ಸುರಿಸುತ್ತಿದ್ದಾರೆ.
ಮಾ.18ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್) ಕಾರಿನಲ್ಲಿ ತೆರಳಲಿದ್ದಾರೆ. ಅವರು ತೆರಳುವ ಮಾರ್ಗದುದ್ದಕ್ಕು ಇದ್ದ ಗುಂಡಿಗಳ ದಿಢೀರ್ ಕಾಣೆಯಾಗಿವೆ.
ಡಾಂಬರೀಕರಣ ಆರಂಭ, ಹಂಪ್ಗಳು ಮಾಯ
ಸಹ್ಯಾದ್ರಿ ಕಾಲೇಜು ಮುಂಭಾಗದಿಂದ ವಿದ್ಯಾನಗರದ ವೃತ್ತಾಕಾರದ ಸೇತುವೆವರೆಗು ರಸ್ತೆಯ ಎರಡು ಬದಿಯಲ್ಲೂ ಹತ್ತಾರು ಗುಂಡಿಗಳಿದ್ದವು. ಅಲ್ಲಲ್ಲಿ ಡಾಂಬಾರ್ ಕಿತ್ತು ಹೋಗಿತ್ತು. ಇದು ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದವು. ಈ ಗುಂಡಿಗಳನ್ನು ಮುಚ್ಚುವಂತೆ ಸ್ಥಳೀಯರು, ವಾಹನ ಸವಾರರು ಒತ್ತಾಯಿಸಿದ್ದರು. ಮಾಧ್ಯಮಗಳಲ್ಲಿಯು ವರಿದಯಾಗಿತ್ತು. ಆದರೆ ಆಗ ಕ್ಯಾರೆ ಅನ್ನದ ಅಧಿಕಾರಿಗಳು, ಈಗ ತರಾತುರಿಯಲ್ಲಿ ಗುಂಡಿಗಳನ್ನು ಮುಚ್ಚಿಸುತ್ತಿದ್ದಾರೆ. ರಸ್ತೆಗೆ ಅಲ್ಲಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಎಂಆರ್ಎಸ್ ಸರ್ಕಲ್ ಸಮೀಪ ಎನ್ಸಿಸಿ ಅಧಿಕಾರಿಗಳ ವಸತಿ ಗೃಹದ ಗೇಟ್ ಮುಂಭಾಗ ಇದ್ದ ಹಂಪ್ಗಳನ್ನು ತೆರವು ಮಾಡಲಾಗಿದೆ.
ಪ್ರಧಾನಿ ಭೇಟಿ ವೇಳೆಗಷ್ಟೆ ಮುತುವರ್ಜಿ
ಬಿ.ಹೆಚ್.ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸಲಿವೆ. ಇವುಗಳನ್ನು ಮುಚ್ಚಿಸುವಂತೆ ಜನರ ಒತ್ತಡವಿದ್ದರೂ, ಅಧಿಕಾರಿಗಳು ಗುಂಡಿಗಳತ್ತ ಕಣ್ಣು ಹಾಯಿಸಿರಲಿಲ್ಲ. ಈಗ ಪ್ರಧಾನಿ ಮೋದಿ ಭೇಟಿ ವೇಳೆ ಅಧಿಕಾರಿಗಳು ತೀವ್ರ ಮುತುವರ್ಜಿಯಿಂದ ಗುಂಡಿಗಳನ್ನು ಹುಡುಕಿ ಬಂದ್ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಕ್ಷೇತ್ರ, ನಾಮಪತ್ರ ಸಲ್ಲಿಕೆ ಯಾವಾಗ? ಮತದಾನದ ದಿನಾಂಕವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200