ಟೋಲ್‌ ವಿರುದ್ಧ ಗರಂ, ಶಿವಮೊಗ್ಗದಲ್ಲಿ ಹೋರಾಟಕ್ಕೆ ದಿನಾಂಕ ಫಿಕ್ಸ್‌, ಸಮಿತಿ ಆರೋಪಗಳೇನು?

SHIMOGA, 25 AUGUST 2024 : ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ ಮಧ್ಯೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಟೋಲ್‌ ಬೂತ್‌ (Toll) ನಿರ್ಮಿಸಲಾಗಿದೆ. ಅವುಗಳನ್ನು ಸರ್ಕಾರ ತೆರವು ಮಾಡಬೇಕು ಎಂದು ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಆ.29ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶಿವರಾಜ್‌ ಪಾಟೀಲ್‌, ರಾಜ್ಯ ಸರ್ಕಾರ ಅವೈಜ್ಞಾನಿಕ ಟೋಲ್‌ ಗೇಟ್‌ಗಳನ್ನು ಕೂಡಲೆ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಆರೋಪಗಳೇನು?

#f1f1f1 POINT-1-jpg.webpರಾಜ್ಯ ಸರ್ಕಾರವು 2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದೆ. ಕಾಯ್ದೆ ಅನುಸಾರ ಗೇಟ್‌ಗಳನ್ನು ನಿರ್ಮಿಸಿಲ್ಲ. ಟೋಲ್‌ಗಳ ನಡುವೆ 60 ಕಿ.ಮೀ ಅಂತರ ಇರಬೇಕು. ಆದರೆ ಶಿಕಾರಿಪುರ ರಸ್ತೆಯಲ್ಲಿ ಕಲ್ಲಾಪುರ ಮತ್ತು ಕುಟ್ರವಳ್ಳಿ ನಡುವೆ 30 ಕಿ.ಮೀ ಅಂತರದಲ್ಲಿ ಎರಡು ಟೋಲ್‌ಗಳಿವೆ.

#f1f1f1 POINT-2-jpg.webpಟೋಲ್‌ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿರುವವರಿಗೆ ಪಾಸ್‌ ಕೊಡಬೇಕು. ಆದರೆ ಇಲ್ಲಿ ಆ ನಿಯಮವನ್ನು ಕೂಡ ಉಲ್ಲಂಘಿಸಲಾಗಿದೆ. ಸ್ಥಳೀಯರು ಕೂಡ ನಿತ್ಯ ಕೆಲಸಕ್ಕೆ, ತೋಟ, ಗದ್ದೆಗೆ ತೆರಳಲು ಟೋಲ್‌ನಲ್ಲಿ ಹಣ ಕಟ್ಟುವಂತಾಗಿದೆ.

Protest against toll plaza

#f1f1f1 POINT-3-jpg.webpಟೋಲ್‌ ಗೇಟ್‌ನಿಂದಾಗಿ ಬಸ್‌ ಪ್ರಯಾಣ ದರ, ಗೂಡ್ಸ್‌ ವಾಹನಗಳ ಬಾಡಿಗೆ ಹೆಚ್ಚಳವಾಗಿದೆ. ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವ ಸಲುವಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿನಯಕ ಪಾಟೀಲ್‌, ಅಬ್ದುಲ್‌ ನವೀದ್‌, ಪುಟ್ಟಣ್ಣ ಗೌಡರು, ಶಿವರಾಜ್‌, ಶೇಖರಪ್ಪ, ಮನ್ಸೂರ್‌ ಖಾನ್‌ ಸೇರಿ ಹಲವರು ಇದ್ದರು.

ಇದನ್ನೂ ಓದಿ ⇒ SHIMOGA JOBS | ಪ್ರತಿ ತಿಂಗಳು 15 ಸಾವಿರ ರೂ.ವರೆಗೆ ಸಂಬಳದ ಕೆಲಸ ಖಾಲಿ ಇದೆ

Leave a Comment