ಶಿವಮೊಗ್ಗದಲ್ಲಿ ಮ್ಯೂಸಿಕಲ್‌ ನೈಟ್‌ಗೆ ಮಳೆ ಅಡ್ಡಿ, ಜನ ಸಿಡಿಮಿಡಿ

SHIMOGA NEWS, 9 OCTOBER 2024 : ಶಿವಮೊಗ್ಗ ದಸರಾದ ಮ್ಯೂಸಿಕಲ್‌ ನೈಟ್‌ (Musical Night) ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ಇನ್ನೊಂದೆಡೆ ಮಳೆ ಬರಲಿದೆ ಎಂಬ ಅರಿವಿದ್ದರೂ ಪೆಂಡಾಲ್‌ ವ್ಯವಸ್ಥೆ ಮಾಡದಿರುವುದನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಯುವ ದಸರಾದ ಅಂಗವಾಗಿ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕರಾದ ರಾಜೇಶ್‌ ಕೃಷ್ಣನ್‌ ಮತ್ತು ಡಾ. ಶಮಿತಾ ಮಲ್ನಾಡ್‌ ಅವರ ತಂಡ ಗಾಯನ ಕಾರ್ಯಕ್ರಮವಿತ್ತು. ಆದರೆ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ.

ಗುಡುಗು, ಮಿಂಚು, ಮಳೆ ಅಬ್ಬರ

ಸಂಜೆ 5 ಗಂಟೆಯಿಂದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಗುಡುಗು ಸಹಿತ ಜೋರು ಮಳೆಯಾಗಿದ್ದರಿಂದ ಕಾರ್ಯಕ್ರಮ ಇನ್ನೂ ಶುರುವಾಗಿಲ್ಲ. ಇನ್ನೊಂದೆಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಕೂರಲು ವ್ಯವಸ್ಥೆ ಇಲ್ಲ. ಜನರು ಛತ್ರಿಗಳು, ಚೇರುಗಳನ್ನು ಹಿಡಿದು ಮಳೆಯಿಂದ ರಕ್ಷಣೆ ಪಡೆದರು.

Musical Night

ಪಾಲಿಕೆ ವಿರುದ್ಧ ಜನರ ಆಕ್ರೋಶ

ಇನ್ನೊಂದೆಡೆ ಮಳೆಯಿಂದ ರಕ್ಷಣೆಗೆ ಜನರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು.

ಇದನ್ನೂ ಓದಿ » ಬಾವಿಗೆ ಬಿದ್ದು ತಳದಲ್ಲಿ ಗಿಡಗಳನ್ನು ಹಿಡಿದು ಕುಳಿತಿದ್ದ ಮಹಿಳೆ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 9, 2024 at 7:25 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 9, 2024

Leave a Comment