ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 7 DECEMBER 2024
ಶಿವಮೊಗ್ಗ : ಸರ್ಜಿ ಆಸ್ಪತ್ರೆಗಳ ಸಮೂಹ ಇನ್ಮುಂದೆ ಪೇಪರ್ ಮುಕ್ತವಾಗಲಿದೆ (Paperless). ಪ್ರತಿ ರೋಗಿಯ ಚಿಕಿತ್ಸಾ ವಿವರವು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ಪರಿಸರ ಹಾನಿ ತಪ್ಪಲಿದೆ, ಚಿಕಿತ್ಸೆ ಮತ್ತಷ್ಟು ಸುಗಮವಾಗಲಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ.ಧನಂಜಯ ಸರ್ಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ, ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದರಲ್ಲೇ ವರ್ಷಕ್ಕೆ ಸರಾಸರಿ ಮೂರು ಟನ್ ಪೇಪರ್ ಬಳಕೆ ಆಗುತ್ತಿದೆ. ಇಷ್ಟು ಪೇಪರ್ಗೆ 76 ಮರಗಳು ಬಳಸಬೇಕಾಗುತ್ತದೆ. ಇದೊಂದೆ ಆಸ್ಪತ್ರೆಯಿಂದ ಇಷ್ಟು ಮರಗಳನ್ನು ಉಳಿಸಿದಂತಾಗುತ್ತದೆ ಎಂದರು.

ಸರ್ಜಿ ಸಮೂಹದ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಸರಾಸರಿ 6.50 ಲಕ್ಷ ಎ4 ಪೇಪರ್ ಬಳಕೆ ಆಗುತ್ತಿದೆ. ಇನ್ಮುಂದೆ ಆ ಪ್ರಮೇಯ ತಪ್ಪಲಿದೆ. ಇದರಿಂದ 250 ಮರಗಳನ್ನು ಉಳಿಸಿದಂತಾಗಲಿದೆ. ಪೇಪರ್ ತಯಾರಿಗೆ ರಾಸಾಯನಿಕ ಬಳಕೆ, ಪರಿಸರ ಹಾನಿ ತಪ್ಪಲಿದೆ.
ಡಾ.ಧನಂಜಯ ಸರ್ಜಿ, ಸರ್ಜಿ ಸಮೂಹದ ಛೇರ್ಮನ್
![]()
ಸಿಬ್ಬಂದಿ ಮತ್ತು ರೋಗಿಗಳಿಗು ಅನುಕೂಲ
ಪ್ರತಿ ರೋಗಿಗೆ ಪ್ರತ್ಯೇಕವಾಗಿ ಯುನಿಕ್ ಐಡಿಯೊಂದಿಗೆ ಡಿಜಿಟಲ್ ಫೈಲ್ ತೆರೆಯಲಾಗುತ್ತದೆ. ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಟ್ಯಾಬ್ಗಳಲ್ಲಿ ದಾಖಲು ಮಾಡಲಿದ್ದಾರೆ. ಕೇಸ್ ಶೀಟ್ ರೀತಿಯಲ್ಲೇ ಡಿಜಿಟಲ್ ರೂಪದಲ್ಲಿ ಕೇಸ್ ಶೀಟ್ ಸಿದ್ಧವಾಗಲಿದೆ. ವೈದ್ಯರು ಮನೆಯಲ್ಲಿದ್ದರು ಈ ಕೇಸ್ ಶೀಟ್ ಗಮನಿಸಬಹುದು. ಇದರಿಂದ ಮತ್ತಷ್ಟು ಗುಣಮಟ್ಟದ ಚಿಕಿತ್ಸೆ ಕೊಡಬಹುದಾಗಿದೆ ಎಂದರು.

ಪ್ರತಿ ಆರು ಪೇಷೆಂಟ್ಗೆ ಒಂದು ಟ್ಯಾಬ್ ಮೀಸಲಿರಲಿದೆ. ನರ್ಸಿಂಗ್ ಸಿಬ್ಬಂದಿ ಇದರಲ್ಲಿ ವಿವರಗಳನ್ನು ದಾಖಲು ಮಾಡಬಹುದು. ಯಾರೆಂದರೆ ಅವರು ಇದನ್ನು ಎಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಡಿಸ್ಚಾರ್ಜ ಆಗುವಾಗ ರೋಗಿಯ ವಾಟ್ಸಪ್ಗೆ ವಿವರಗಳನ್ನು ಕಳುಹಿಸಲಾಗುತ್ತದೆ. ಮೂರು ವರ್ಷದವರೆಗೆ ವೈದ್ಯಕೀಯ ವಿವರಗಳು ನಮ್ಮ ಬಳಿ ಸಂಗ್ರಹವಾಗಿರಲಿದೆ.
ಡಾ. ಧನಂಜಯ ಸರ್ಜಿ, ಸರ್ಜಿ ಸಮೂಹದ ಛೇರ್ಮನ್
![]()

ಇಲ್ಲಿ ಸಂಗ್ರಹವಾಗುವ ಪ್ರತಿ ದಾಖಲೆಯ ಮೂರು ಕಾಪಿಗಳು ನಮ್ಮ ಬಳಿ ಇರಲಿದೆ. ಈ ವ್ಯವಸ್ಥೆಯನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಾಖಲೆಗಳು ಅತ್ಯಂತ ಸುರಕ್ಷಿತವಾಗಿರಲಿದೆ.
ಅಕ್ಷಯ್ ನಾಯಕ್, ಅನ್ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್
![]()
ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಎಸ್.ವೀರಯ್ಯ, ವೈದ್ಯಕೀಯ ಅಧೀಕ್ಷಕ ಡಾ. ವಿಜಯ್ ಕುಮಾರ್ ಮಾಯೇರ, ಬಿ.ಎಸ್.ಕಾರ್ತಿಕ್ ಇದ್ದರು.
ಇದನ್ನೂ ಓದಿ » ಕೇಂದ್ರ ಸಂಪುಟ ಸಭೆ, ಶಿವಮೊಗ್ಗ ಕೇಂದ್ರಿಯ ವಿದ್ಯಾಲಯ ಕುರಿತು ಮಹತ್ವದ ನಿರ್ಧಾರ
Paperless
LATEST NEWS
- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

About The Editor
ನಿತಿನ್ ಆರ್.ಕೈದೊಟ್ಲು
















