SHIVAMOGGA LIVE NEWS | 30 MAY 2024
SHIMOGA : ಆರ್ಯವೈಶ್ಯ ಮಹಾಜನ ಸಮಿತಿ ನೂರು ವರ್ಷ ಪೂರೈಸಿರುವ ಹಿನ್ನೆಲೆ ಶಿವಮೊಗ್ಗದ ನವ್ಯಶ್ರೀ ಸಭಾಂಗಣದಲ್ಲಿ ಜೂ.2ರಂದು ಶೆಟ್ಟರ ಸಂತೆ (Shettara Sante) ಕಾರ್ಯಕ್ರಮ ಆಯೋಜಿಸಲಾಗಿದೆ. ತಿಂಡಿ ತಿನಿಸು, ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಸಮಿತಿಯ ಛೇರ್ಮನ್ ಪ್ರತಿಭಾ ಅರುಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಅರುಣ್, ಶೆಟ್ಟರ ಸಂತೆಯಲ್ಲಿ ಶೆಟ್ಟರ ಬ್ರ್ಯಾಂಡ್ ಚಕ್ಕುಲಿ, ಕೋಡುಬಳೆ, ಕಟ್ಲೆಟ್ಟು, ನಿಪ್ಪಟ್ಟು, ಮಸಾಲೆ ಮಂಡಕ್ಕಿ, ಬೋಂಡಾ ಮಸಾಲೆ, ಪಾನಿಪುರಿ, ಹೊಯ್ ಹಪ್ಪಳ, ಹಪ್ಪಳದ ಇಡ್ಲಿ, ಹೋಂ ಮೇಡ್ ಕೇಕ್ ಸೇರಿ ಹಲವು ಕುರುಕಲು ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದರು.
ಪ್ರತ್ಯೇಕ ಹಾಲ್ನಲ್ಲಿ ಸೀರೆಗಳು, ಡ್ರೆಸ್ ಮೆಟೀರಿಯಲ್, ಮಕ್ಕಳ ರೆಡಿಮೇಡ್ ಉಡುಪು, ವಸ್ತ್ರ ವಿನ್ಯಾಸಕಾರರ ವಿಶಿಷ್ಟತೆಗಳ ಕರಕುಶಲ ವಸ್ತುಗಳು, ಜೂಟ್ ಬ್ಯಾಗ್ಗಳು, ಬ್ಯೂಟಿ ಅಸೆಸರೀಸ್ಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇದೆ ವೇಳೆ ವಿವಿಧ ಮನರಂಜನೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಪ್ರತಿಭಾ ಅರುಣ್ ತಿಳಿಸಿದರು.
ಇಡೀ ದಿನ ಪ್ರದರ್ಶನ, ಮಾರಾಟ
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪ್ರತಿಭಾ ಅರುಣ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈಶ್ವರವನದ ಎಂ.ವಿ.ನಾಗೇಶ್ ಮತ್ತು ಶಶಿಕಲಾ ದಂಪತಿ ಅವರು ಕುರುಕ್ ತಿಂಡಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ದಂಪತಿ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಭೂಪಾಳಂ ಶಶಿಧರ್, ವಿದ್ಯಾ ಸುದರ್ಶನ್, ಎಂ.ಜೆ.ಮಂಜುನಾಥ್, ನರೇಶ್, ನಾಗರಾಜ್ ಶೆಟ್ಟರ್ ಇದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಆಂಜನೇಯ ಸ್ವಾಮಿಯ ವೈಭವದ ರಥೋತ್ಸವ, ಏನೆಲ್ಲ ಪೂಜೆ ನಡೆಯಿತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200