ಶಿವಮೊಗ್ಗ: UPI ಬಳಸುತ್ತಿರುವ ಬೆಂಗಳೂರಿನ ಸಾವಿರಾರು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ. ಇದರ ಬೆನ್ನಿಗೆ ಶಿವಮೊಗ್ಗದಲ್ಲಿಯು ವ್ಯಾಪಾರಿಗಳಲ್ಲಿ ಗೊಂದಲ, ಆತಂಕ ಮೂಡಿದೆ.
ಶಿವಮೊಗ್ಗದಲ್ಲಿ ವ್ಯಾಪಾರಿಗಳು ಗೂಗಲ್ ಪೇ, ಫೋನ್ ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಪಾರ ಆರಂಭಿಸುತ್ತಿದ್ದಾರೆ.
ಇದನ್ನೂ ಓದಿ » ಸಿಗಂದೂರು ಲಾಂಚ್ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್ ಇತಿಹಾಸ
ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?
» ಪರಿಸ್ಥಿತಿ 1: ಕೆಲವು ವ್ಯಾಪಾರಿಗಳು ಯು.ಪಿ.ಐ ಬಳಕೆಗೆ ಮಿತಿ ವಿಧಿಸುತ್ತಿದ್ದಾರೆ. ನಗದು ಮೂಲಕವೆ ವ್ಯಾಪಾರ ಮಾಡುತ್ತಿದ್ದಾರೆ. ತೀರಾ ಹಣವೇ ಇಲ್ಲ ಎಂದವರಿಂದ ಅನಿವಾರ್ಯವಾಗಿ ಯು.ಪಿ.ಐ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.
» ಪರಿಸ್ಥಿತಿ 2: ಒಂದಷ್ಟು ವ್ಯಾಪಾರಿಗಳು ನಗದು ಮೂಲಕವೇ ವ್ಯಾಪಾರ ನಡೆಸುತ್ತೇವೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ. ಗೂಗಲ್ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿದ್ದಾರೆ.
» ಪರಿಸ್ಥಿತಿ 3: ಗೂಗಲ್ ಪೇಯನ್ನು ಒಬ್ಬರ ಹೆಸರಿನ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು, ಫೋನ್ ಪೇಯನ್ನು ಮತ್ತೊಬ್ಬರ ಹೆಸರಿನ ಖಾತೆಗೆ ಲಿಂಕ್ ಮಾಡುವುದು. ಒಂದೇ ಬ್ಯಾಂಕ್ ಖಾತೆಗೆ ಹೆಚ್ಚಿನ ಮೊತ್ತ ಸೇರದಂತೆ ತಡೆಯಬಹುದು.

65 ಸಾವಿರ ವರ್ತಕರ ಮಾಹಿತಿ
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ 65 ಸಾವಿರ ವರ್ತಕರ ಮಾಹಿತಿಯನ್ನು ಯು.ಪಿ.ಐ ಪ್ಲಾಟ್ಫಾರಂಗಳಿಂದ ಪಡೆದುಕೊಂಡಿದ್ದಾರೆ. ಈ ಪೈಕಿ 15 ಸಾವಿರ ವರ್ತಕರಿಗೆ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಸುಮಾರು 6 ಸಾವಿರ ವರ್ತಕರಿಗೆ ನೊಟೀಸ್ ನೀಡಲಾಗಿದೆ. ಕೆಲವರಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ.

ಇನ್ನು, ಈ ವ್ಯಾಪಾರಿಗಳಿಗೆ ಜಿಎಸ್ಟಿ ವ್ಯಾಪ್ತಿಗೆ ಒಳಪಡುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯ ಗೊಂದಲದಲ್ಲಿರುವ ವರ್ತಕರು ಮುಂದಿನ ಬೆಳವಣಿಗೆ ಬಗ್ಗೆ ಗಮನ ನೆಟ್ಟಿದ್ದಾರೆ. ನೊಟೀಸ್, ದಂಡದ ಅಸ್ತ್ರದಿಂದ ಪಾರಾಗುವ ಮಾರ್ಗದತ್ತ ಯೋಚಿಸುತ್ತಿದ್ದಾರೆ.







