SHIVAMOGGA LIVE NEWS | 3 SEPTEMBER 2023
SHIMOGA : ಮಾತನಾಡುವುದೆ ಸಾಧನೆಯಲ್ಲ. ಕಾರ್ಯಸಾಧನೆ ಮಾತನಾಡಬೇಕು. ಉದ್ಯಮಿ ಡಿ.ಟಿ.ಪರಮೇಶ್ ಅವರ ಕಾರ್ಯ ಸಾಧನೆ ಅನುಕರಣೀಯ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದರು.
ಶಂಕರಮಠ ರಸ್ತೆಯ ಶೃತಿ ಮೋಟರ್ಸ್ ಶೋ ರೂಂನಲ್ಲಿ (Show Room) ಡಿ.ಟಿ.ಪರಮೇಶ್ ಅವರ ಸವಿನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾವಿರಾರು ಕುಟುಂಬಕ್ಕೆ ಈ ಸಂಸ್ಥೆ ಜೀವನಾಧಾರವಾಗಿದೆ. ಪರಮೇಶ್ ಅವರ ಪ್ರೀತಿಯ ಮಾತು, ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಶ್ರೀಗಳು ಸಲಹೆ ನೀಡಿದರು.
ಶೃತಿ ಮೋಟರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಮೋಹನ್.ಡಿ.ಪಿ, ಡಾ.ಆಶ್ವತ್ ನಾರಾಯಣ ಶೆಟ್ಟಿ, ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಇದ್ದರು. ಇದೇ ವೇಳೆ ಡಿ.ಟಿ.ಪರಮೇಶ್ ಅವರಿಗೆ ಶೃತಿ ಮೋಟರ್ಸ್ ಸಿಬ್ಬಂದಿ ಗೌರವ ಸಲ್ಲಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋಮ್ಯಾಟಿಕ್ ದಂಡ, ನಿಮ್ಮ ಗಾಡಿ ಮೇಲೆ ಕೇಸ್ ಇದೆಯಾ? ತಿಳಿಯಲು ಇಲ್ಲಿದೆ 2 ಮಾರ್ಗ – JUST ಮಾಹಿತಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200