NEWS HIGHLIGHTS
ಶಿವಮೊಗ್ಗ: ನಗರದ ಆಲ್ಕೊಳ ಸಮೀಪದ ಸುಲ್ತಾನ್ ಮೊಹಲ್ಲಾದಲ್ಲಿ ರಾತ್ರಿ ವೇಳೆ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡು ಸಾರ್ವಜನಿಕರನ್ನು ಆತಂಕ ಮೂಡಿಸತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಉರಗ ರಕ್ಷಣ ಸ್ನೇಕ್ ಕಿರಣ್ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಜೂನ್ 25ರ ರಾತ್ರಿ ಮಂದಾರ ಮಂದಿರದ ಹತ್ತಿರದ 2ನೇ ಕ್ರಾಸ್ನಲ್ಲಿರುವ ಚಿನ್ನಪ್ಪ ಎಂಬುವವರ ಮನೆ ಎದುರಿನ ಚರಂಡಿಯಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಸ್ನೇಕ್ ಕಿರಣ್ ಅವರು ಕಾರ್ಯಾಚರಣೆ ನಡೆಸಿ, ಚರಂಡಿಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

ಇದನ್ನೂ ಓದಿ:➤ ಸಿಎಂ ಜೊತೆಗೆ ಶಿವಮೊಗ್ಗ ಡಿಸಿ ವಿಡಿಯೋ ಕಾನ್ಫರೆನ್ಸ್, ಬಳಿಕ ದಿಢೀರ್ ಮೀಟಿಂಗ್, ಏನಂದ್ರು ಜಿಲ್ಲಾಧಿಕಾರಿ?