NEWS HIGHLIGHTS
ಶಿವಮೊಗ್ಗ: ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಬೆಕ್ಕಿನಕಲ್ಮಠ ಸಂಸ್ಥೆಯ ಕಚೇರಿಯೊಳಗೆ ನುಗ್ಗಿದ್ದ ಬೃಹತ್ ಕೇರೆಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಶ್ರೀ ಬೆಕ್ಕಿನಕಲ್ಮಠದ ಕಚೇರಿಗೆ ಮಧ್ಯಾಹ್ನ 1.30ರ ಸುಮಾರಿಗೆ ಹಾವೊಂದು ನುಗ್ಗಿದೆ. ಕಚೇರಿಯಲ್ಲಿದ್ದ ಬೀರುವಿನ ಕೆಳಭಾಗದಲ್ಲಿ ಹಾವು ಸೇರಿಕೊಂಡಿದ್ದನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಆತಂಕಗೊಂಡು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ಕಚೇರಿಗೆ ಧಾವಿಸಿದ ಸ್ನೇಕ್ ಕಿರಣ್ ಅವರು, ಬೀರುವಿನ ಅಡಿಯಲ್ಲಿದ್ದ ಹಾವನ್ನು ಪರಿಶೀಲಿಸಿದರು. ಅದು ಕೇರೆಹಾವು ಎಂದು ಗುರುತಿಸಿ ಸುರಕ್ಷಿತವಾಗಿ ಹಿಡಿದಿದ್ದಾರೆ. ಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.