ಶಿವಮೊಗ್ಗ ಹಳೆ ಸೇತುವೆ ಬಳಿ ಒಂದೇ ಮರದಲ್ಲಿ ರಕ್ಷಣೆ ಪಡೆದ 20ಕ್ಕೂ ಹೆಚ್ಚು ಹಾವುಗಳು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ತುಂಗಾ ನದಿ ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಿದರೆ ಹಳೆ ಶಿವಮೊಗ್ಗ ಜಲಾವೃತ ಆಗಲಿದೆ ಎಂಬ ಆತಂಕವಿದೆ. ಮತ್ತೊಂದೆಡೆ ಹಾವುಗಳು ಕೂಡ ನೀರಿನ ರಭಸಕ್ಕೆ ಬೆಚ್ಚಿಬಿದ್ದು ಮರದ ಮೇಲೆ ಆಶ್ರಯ ಪಡೆದಿವೆ.

ಶಿವಮೊಗ್ಗದ ಬೆಕ್ಕಿನಕಲ್ಮಠದ ಕಾಂಪೌಂಡ್‍ಗೆ ಹೊಂದಿಕೊಂಡಂತೆ ಇರುವ ಮರದಲ್ಲಿ, ಹಾವುಗಳು ರಕ್ಷಣೆ ಪಡೆದುಕೊಂಡಿವೆ. ಸುಮಾರು 20 ಹಾವುಗಳು ಒಂದೆ ಮರದಲ್ಲಿ ಆಶ್ರಯ ಪಡೆದುಕೊಂಡಿವೆ.

ಹಾವುಗಳು ಇರುವುದನ್ನು ಗಮನಿಸಿದ ಜನರು ಕೂಡಲೆ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್‍, ಮರದಲ್ಲಿ ಇರುವುದು ವಿಷಪೂರ ಹಾವುಗಳಲ್ಲ ಎಂದು ಸ್ಥಳೀಯರಿಗೆ ಮಾಹಿತಿ ನೀಡಿ, ಧೈರ್ಯ ಹೇಳಿದರು.

ಚರಂಡಿ, ಹೊಳೆ ಸಮೀಪದಲ್ಲಿ ಇದ್ದ ಹಾವುಗಳು, ಕೊನೆಗೆ ನೀರಿನ ರಭಸದಿಂದಾಗಿ ಇಲ್ಲಿಗೆ ತೇಲಿ ಬಂದಿರುವ ಸಾದ್ಯತೆ ಇದೆ. ಯಾವುದೇ ಆಸರೆ ಸಿಗದೆ ಕೊನೆಗೆ ಈ ಮರದಲ್ಲಿ ಆಶ್ರಯ  ಪಡೆದಿರಬಹುದು. ಇವುಗಳಿಂದ ಯಾವುದೇ ಅಪಾಯವಿಲ್ಲ ಎಂದು ಸ್ನೇಕ್ ಕಿರಣ್ ತಿಳಿಸಿದರು.

https://www.facebook.com/liveshivamogga/videos/313513999769282/?t=3

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment