ಕುವೆಂಪು ವಿವಿಯಲ್ಲಿ ಮೂರು ದಿನ ಸಮಾಜದಲ್ಲಿ ಜ್ಞಾನ ಸಮಾವೇಶ, ಯಾರೆಲ್ಲ ಭಾಗವಹಿಸ್ತಿದ್ದಾರೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ : ಅಭಿವೃದ್ಧಿಯ ದಾರಿಯಲ್ಲಿ ಜ್ಞಾನದ ಬಗೆಗಿನ ಪ್ರಶ್ನೆ ಗಳನ್ನು ಮುಕ್ತವಾಗಿ ಚರ್ಚಿಸಲು ಫೆ.20ರಿಂದ ಮೂರು ದಿನ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ‘ಸಮಾಜದಲ್ಲಿ ಜ್ಞಾನ’ ಸಮಾವೇಶ (conference) ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ .ಶರತ್ ಅನಂತಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಜರ್ನಲ್ಸ್ ಆಫ್ ಡೈಲಾಗ್ಸ್ ಆನ್ ನಾಲೆಜ್ ಇನ್ ಸೊಸೈಟಿ ಸಹಯೋಗದಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನಡೆಯುತ್ತಿರುವ ಈ ಮಾದರಿಯ ಮೊದಲ ಸಮಾವೇಶವಾಗಿದೆ ಎಂದರು.

Kuvempu-University-VC-Prof-Sharata-ananthamurthya-and-prof-meti-mallikarjun

ವಿವಿಧ ಕ್ಷೇತ್ರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮುಕ್ತವಾಗಿ ಚರ್ಚಿಸಲಿದ್ದಾರೆ. ತಂತ್ರಜ್ಞಾನ ದೇಶಕ್ಕೆ ಬರುವ ಮೊದಲು ಹಲವು ಜ್ಞಾನದ ಶಾಖೆಗಳಿದ್ದವು. ಆದರೆ, ಅವುಗಳನ್ನು ಇಂದು ಸೀಮಿತ ಮಾಡಲಾಗುತ್ತಿದೆ. ಸಮಾಜದ ಹಲವು ವಿಷಯಗಳನ್ನು ಪೂರ್ವಾಗ್ರಹ ಪೀಡಿತವಾಗಿ ಮಾತನಾಡುತ್ತಿದ್ದೇವೆಯೇ ಹೊರತು ಸತ್ಯದ ಬಗ್ಗೆ ಮಾತನಾಡುತ್ತಿಲ್ಲ. ಈ ವಿಷಯಗಳ ಬಗ್ಗೆ ಸಮಾನವಾಗಿ ಮಾತನಾಡುವವರ ನಡುವೆ ಸಂವಾದ ನಡೆಯಲಿದೆ

ಪ್ರೊ. ಶರತ್‌ ಅನಂತಮೂರ್ತಿ, ಕುವೆಂಪು ವಿವಿ ಕುಲಪತಿ

NATIONAL-PUBLIC-SCHOOL-scaled

ಫೆ.20ರಂದು ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಚಿಂತಕ ಪ್ರೊ.ಜಿ.ಎನ್.ದೇವಿ ಸಮಾವೇಶ ಉದ್ಘಾಟಿಸಲಿದ್ದಾರೆ. ವಾರಣಾಸಿ ವಿದ್ಯಾಶ್ರಮದ ಸುನಿಲ್ ಸಹಸ್ರಬುದ್ಧೆ ಆಶಯ ಭಾಷಣ ಮಾಡಲಿದ್ದಾರೆ.

ಪ್ರೊ. ರಾಮಪ್ರಸಾದ್, ಸಮಾವೇಶ ಸಂಯೋಜಕ

65 ವಿದ್ವಾಂಸರು, ವಿವಿಧ ರಾಜ್ಯಗಳ ಪ್ರೊಫೆಸರ್‌ಗಳು, ಕಲಾವಿದರು, ತತ್ವಜ್ಞಾನಿಗಳು ಸಮಾವೇಶದಲ್ಲಿ ಸಂವಾದ ನಡೆಸಲಿದ್ದಾರೆ. ಮೂರು ದಿನ ಒಟ್ಟು ಎಂಟು ಗೋಷ್ಠಿಗಳು ನಡೆಯಲಿವೆ. ಒಂದೇ ವಿಷಯದ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. 120 ಜನ ಪ್ರತಿಕ್ರಿಯೆ ನೀಡಲಿದ್ದಾರೆ. ಇಲ್ಲಿ ಸಂಗ್ರಹವಾದ ಪ್ರಬಂಧಗಳನ್ನು  ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ರೈತರು, ತಳ ಸಮುದಾಯ, ಆದಿವಾಸಿಗಳ ಬಗ್ಗೆ ಅಧ್ಯಯನ ಮಾಡಿದವರು ಮುಕ್ತ ವೇದಿಕೆಯಲ್ಲಿ ವಿಚಾರ ಮಂಡಿಸಲಿದ್ದಾರೆ.

ಪ್ರೊ. ಮೇಟಿ ಮಲ್ಲಿಕಾರ್ಜುನ್‌, ಸಮಾವೇಶದ ಸಂಯೋಜಕ

ಕುವೆಂಪು ವಿವಿ ಕುಲಪತಿ ಎಲ್.ಎಲ್.ಮಂಜುನಾಥ್‌, ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲ ಟಿ.ಅವಿನಾಶ್, ಕುವೆಂಪು ವಿವಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಎಂ.ಆರ್‌.ಸತ್ಯಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Parishrama advt 10 feb 2025 1

ಇದನ್ನೂ ಓದಿ » ಬಂಗಾರಪ್ಪ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಗ್ರಂಥಾಲಯ, 5 ಲಕ್ಷದ ಚೆಕ್‌ ನೀಡಿದ ಸಚಿವ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment