ಶಿವಮೊಗ್ಗದಿಂದ KSRTC ಬಸ್‌ ಹತ್ತಿದ ಮಹಿಳೆ, ನಡು ದಾರಿಯಲ್ಲಿ ಕಾದಿತ್ತು ಶಾಕ್‌

SHIVAMOGGA LIVE NEWS | 5 FEBRUARY 2024

SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತರೀಕೆರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ನಾಪತ್ತೆಯಾಗಿದೆ. ತರೀಕೆರೆ ತಾಲೂಕಿನ ಜಯಮ್ಮ ಅವರ ಚಿನ್ನದ ಸರ ಕಳ್ಳತನವಾಗಿದೆ.  ಸಂಬಂಧಿಯೊಬ್ಬರು ಅಪಘಾತಕ್ಕೀಡಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಿ ಜಯಮ್ಮ, ಶಿವಮೊಗ್ಗದಿಂದ ತರೀಕೆರೆಗೆ ಮರಳುತ್ತಿದ್ದರು.

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುವಾಗ ಶಿವಮೊಗ್ಗ – ಭದ್ರಾವತಿ ಮಾರ್ಗ ಮಧ್ಯೆ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ ಬಂಗಾರದ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಸೀಟಿನ ಅಡಿ ಬಿದ್ದಿರಬಹುದು ಎಂದು ಜಯಮ್ಮ ಬಸ್ಸಿನಲ್ಲಿ ಹುಡಕಿದ್ದಾರೆ. ಮನೆಗೆ ಹೋಗಿ ತಾವು ಧರಿಸಿದ್ದ ಬಟ್ಟೆ, ಕೈಲಿದ್ದ ಬ್ಯಾಗ್‌ ಕೂಡ ಪರಿಶೀಲಿಸಿದ್ದಾರೆ. ಬಂಗಾರದ ಸರ ಪತ್ತೆಯಾಗದ ಹಿನ್ನೆಲೆ ದೂರು ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ತಮ್ಮ ಬಂಗಾರದ ಸರ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalleshwara-Enterprises.webp

ಇದನ್ನೂ ಓದಿ – ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಓಡಿಸಿದ ಚಾಲಕ, ವಿಡಿಯೋ ತೆಗೆದು ಪೊಲೀಸರಿಗೆ ಕಳುಹಿಸಿದ ಪ್ರಯಾಣಿಕ, ಮುಂದೇನಾಯ್ತು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment