ಶಿವಮೊಗ್ಗ: ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಅಪ್ಪಟ ಮಲೆನಾಡು ಪ್ರದೇಶಗಳು ಈಗ ವಿಪರೀತ ತಾಪಮಾನ (weather) ಹೊಂದಿವೆ.
ಇದನ್ನೂ ಓದಿ : ಸಿಗಂದೂರು ರಸ್ತೆಯ ಗೋಡೌನ್ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?
ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಧಗೆ ಶುರುವಾಗುತ್ತದೆ. ಮಧ್ಯಾಹ್ನದ ವೇಳೆಗೆ ಸಹಿಸಲು ಸಾಧ್ಯವಾಗದಷ್ಟು ಬಿಸಿಲು ಮತ್ತು ಸೆಕೆಗೆ ಜನ, ಜಾನುವಾರುಗಳು ಬಸವಳಿಯುತ್ತಿದ್ದಾರೆ. ಸಂಜೆ ಮತ್ತು ರಾತ್ರಿಯೂ ಧಗೆ ಮುಂದುವರೆಯಲಿದೆ. ಮನೆ, ಕಚೇರಿಗಳ ಒಳಗೆ ಫ್ಯಾನು, ಕೂಲರ್, ಎ.ಸಿ ಇಲ್ಲದೆ ಜನರು ದಿನ ದೂಡುವುದೇ ಕಷ್ಟದಾಯವಾಗಿದೆ.
ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 37 | 22 |
| ಭದ್ರಾವತಿ | 37 | 22 |
| ತೀರ್ಥಹಳ್ಳಿ | 35 | 21 |
| ಸಾಗರ | 34 | 22 |
| ಹೊಸನಗರ | 35 | 23 |
| ಸೊರಬ | 38 | 23 |
| ಶಿಕಾರಿಪುರ | 37 | 22 |






