ಅಪ್ಪಟ ಮಲೆನಾಡಿನಲ್ಲು ವಿಪರೀತ ತಾಪ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ಉಷ್ಣಾಂಶ?

Published On : ಏಪ್ರಿಲ್ 24, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಅಪ್ಪಟ ಮಲೆನಾಡು ಪ್ರದೇಶಗಳು ಈಗ ವಿಪರೀತ ತಾಪಮಾನ (weather) ಹೊಂದಿವೆ.

ಇದನ್ನೂ ಓದಿ : ಸಿಗಂದೂರು ರಸ್ತೆಯ ಗೋಡೌನ್‌ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?

ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಧಗೆ ಶುರುವಾಗುತ್ತದೆ. ಮಧ್ಯಾಹ್ನದ ವೇಳೆಗೆ ಸಹಿಸಲು ಸಾಧ್ಯವಾಗದಷ್ಟು ಬಿಸಿಲು ಮತ್ತು ಸೆಕೆಗೆ ಜನ, ಜಾನುವಾರುಗಳು ಬಸವಳಿಯುತ್ತಿದ್ದಾರೆ. ಸಂಜೆ ಮತ್ತು ರಾತ್ರಿಯೂ ಧಗೆ ಮುಂದುವರೆಯಲಿದೆ. ಮನೆ, ಕಚೇರಿಗಳ ಒಳಗೆ ಫ್ಯಾನು, ಕೂಲರ್‌, ಎ.ಸಿ ಇಲ್ಲದೆ ಜನರು ದಿನ ದೂಡುವುದೇ ಕಷ್ಟದಾಯವಾಗಿದೆ.

ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ತಾಲೂಕುಗರಿಷ್ಠಕನಿಷ್ಠ
ಶಿವಮೊಗ್ಗ3722
ಭದ್ರಾವತಿ3722
ತೀರ್ಥಹಳ್ಳಿ3521
ಸಾಗರ3422
ಹೊಸನಗರ3523
ಸೊರಬ3823
ಶಿಕಾರಿಪುರ3722

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 24, 2026

Leave a Comment