SHIVAMOGGA LIVE NEWS | 12 DECEMBER 2022
ಸಾಗರ : ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಫೋಟೊ ತೆಗೆಯುತ್ತಿದ್ದಾಗಲೆ ಛಾಯಗ್ರಾಹಕನಿಗೆ (photographer) ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ.
ಸಾಗರದ ರಾಮನಗರದ ಚಂದ್ರಶೇಖರ್ (43) ಮೃತರು. ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಚಂದ್ರಶೇಖರ್ ಅವರು ಫೋಟೊ ತೆಗೆಯುತ್ತಿದ್ದಾಗ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಗಂಡ, ಹೆಂಡತಿ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ
ಕಾರ್ಯಕ್ರಮದ ಫೋಟೊ (photographer) ತೆಗೆಯುತ್ತಿದ್ದಾಗಲೆ ಚಂದ್ರಶೇಖರ್ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವಾಯಿತು. ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಚಂದ್ರಶೇಖರ್ ಅವರು ಮೃತಪಟ್ಟಿದ್ದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಸಾಗರದಲ್ಲಿ ಶಿಲ್ಪಾ ಸ್ಟೂಡಿಯೋ ನಡೆಸುತ್ತಿದ್ದರು.