ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಹಿನ್ನೆಲೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆ ಸೇರಿ, ಭದ್ರಾವತಿಯಲ್ಲಿ ಪ್ರತ್ಯೇಕ ಐದು ದೂರುಗಳು ದಾಖಲಾಗಿವೆ.
ಭದ್ರಾವತಿಯಲ್ಲಿ ಪರವಾನಗಿ ಇಲ್ಲದೇ ತರಲಾಗುತ್ತಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಎಫ್ಐಆರ್ ದಾಖಲಾಗಿದೆ.
ರಾಮಣ್ಣ ಶ್ರೇಷ್ಠಿ ಪಾರ್ಕ್’ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಊಟ ವಿತರಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಹಾಗೂ ಪರವಾನಗಿ ಪಡೆಯದೇ ನಾಲ್ಕು ವಾಹನಗಳನ್ನು ಬಳಸಿದ್ದು, ಪಕ್ಷದ ಧ್ವಜಗಳನ್ನೊಳಗೊಂಡ ಜೀಪ್ ಕಂಡುಬಂದಿದೆ.
ಈ ಎಲ್ಲವುಗಳ ಬಗ್ಗೆ ದೂರು ದಾಖಲಾಗಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]