ದಿಢೀರ್ ಪ್ರತಿಭಟನೆ ಕೈಬಿಟ್ಟ ಜಿಲ್ಲಾ ಕಾಂಗ್ರೆಸ್, ಹೋರಾಡುವ ಪಟ್ಟು ಹಿಡಿದ ಕಾರ್ಯಕರ್ತರು, ಕೆಲಕಾಲ ಕೈ ಕಚೇರಿಯಲ್ಲಿ ಹೈಡ್ರಾಮಾ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 19 ಡಿಸೆಂಬರ್ 2019

ಪೌರತ್ವ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ದೊಡ್ಡ ಮಟ್ಟದ ಪ್ರತಿಭಟನಗೆ ಜಿಲ್ಲಾ ಕಾಂಗ್ರೆಸ್ ಸಜ್ಜಾಗಿತ್ತು. ಆದರೆ ನಿಷೇಧಾಜ್ಞೆ ಜಾರಿಯಾಗಿದ್ದರಿಂದ ಕೊನೆ ಕ್ಷಣದಲ್ಲಿ ಪ್ರತಿಭಟನೆ ಕೈಬಿಡಲು ಮುಖಂಡರು ನಿರ್ಧರಿಸಿದರು. ಇದನ್ನು ಘೋಷಿಸುತ್ತಿದ್ದಂತೆ, ಪ್ರತಿಭಟನೆ ನಡೆಸಿಯೆ ತೀರುವುದಾಗಿ ಕಾರ್ಯಕರ್ತರು ಪಟ್ಟು ಹಿಡಿದರು. ಇದರಿಂದ ಕಾಂಗ್ರೆಸ್ ಕಚೇರಿಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು.

80565368 1004513293243424 6296650458001833984 n.jpg? nc cat=110& nc eui2=AeF0Rws5ymAHFExyIpV5LOSVs1iEJ60hjaviJc MIoASMUTLTB7Nt99SKnPM0HubYqc4nGQSsSc47Z UtbTMXLs5m0S7s2W3jJwi PJS2ouhbQ& nc ohc=xAnF4sirJKQAQkbyk8l REWBMt4p3IFBi7P5alWj90MkrBEQ9fvCegzQg& nc ht=scontent.fblr11 1

ಮುಖಂಡರ ಮೀಟಿಂಗ್

ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಾಗಿದ್ದರಿಂದ, ಪ್ರತಿಭಟನೆ ನಡೆಸಬೇಕೇ ಬೇಡವೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಮೀಟಿಂಗ್ ನಡೆಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ತೀ.ನಾ.ಶ್ರೀನಿವಾಸ್, ವಿಶ್ವನಾಥ್ ಕಾಶಿ, ಕಾರ್ಪೊರೇಟರ್ ಯೋಗೇಶ್ ಸೇರಿದಂತೆ ಹಲವರು ಕಿರು ಸಭೆ ನಡೆಸಿದರು. ನಿಷೇಧಾಜ್ಞೆ ಇರುವುದರಿಂದ ಪ್ರತಿಭಟನೆ ನಡೆಸದಿರಲು ತೀರ್ಮಾನಿಸಿದರು.

ಪ್ರತಿಭಟಿಸುವ ಪಟ್ಟು ಹಿಡಿದ ಕಾರ್ಯಕರ್ತರು

ಪ್ರತಿಭಟನೆಯನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಮುಖಂಡರು ಘೋಷಿಸುತ್ತಿದ್ದಂತೆ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ತಾವು ಹೋರಾಟ ಮಾಡಿಯೇ ತೀರುವುದಾಗಿ ಘೋಷಿಸಿದರು. ಈ ವೇಳೆ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಖಂಡರು ಹರಸಾಹಸ ಪಡಬೇಕಾಯಿತು. ಕೊನೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಮತ್ತು ಸುಂದರೇಶ್ ಅವರು ಕಾರ್ಯಕರ್ತರನ್ನು ಸಮಾಧಾನಿಸಿದರು.

79899279 1004513273243426 7125665303173791744 n.jpg? nc cat=107& nc eui2=AeH9hcxxRh34VPEECSigDAKb8JY3DcWP3tLbLlTI6H1 OBZOZvcgG72QwNeE5eVZh7aVohABeLrOqsDQPCmGAZ 8RFOTumFgHN4SdhDS109o8A& nc ohc=uqFKnfvSaYoAQnIeGuk7Qri dBtRfy3JFHxfsckpY lt9vkVWdfFUdqUw& nc ht=scontent.fblr11 1

ಸಾಂಕೇತಿಕ ಹೋರಾಟ, ಘೋಷಣೆ

ಪ್ರತಿಭಟನೆ ಕೈಬಿಟ್ಟರೂ ಪಕ್ಷದ ಕಚೇರಿ ಒಳಗೆ ಕಾರ್ಯಕರ್ತರು ಸಾಂಕೇತಿಕವಾಗಿ ಹೋರಾಟ ನಡೆಸಿದರು. ಕೇಂದ್ರ ಸರ್ಕಾರ, ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.

80565368 1004513293243424 6296650458001833984 n.jpg? nc cat=110& nc eui2=AeF0Rws5ymAHFExyIpV5LOSVs1iEJ60hjaviJc MIoASMUTLTB7Nt99SKnPM0HubYqc4nGQSsSc47Z UtbTMXLs5m0S7s2W3jJwi PJS2ouhbQ& nc ohc=xAnF4sirJKQAQkbyk8l REWBMt4p3IFBi7P5alWj90MkrBEQ9fvCegzQg& nc ht=scontent.fblr11 1

ಟೈಟ್ ಪೊಲೀಸ್ ಸೆಕ್ಯೂರಿಟಿ

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸದಂತೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು. ಅಲ್ಲದೆ, ಮೈಕ್ ಮೂಲಕ ನಿಷೇಧಾಜ್ಞೆ ಕುರಿತು ಅನೌನ್ಸ್ ಮಾಡಿದರು. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಡಿವೈಎಸ್’ಪಿ ಉಮೇಶ್ ನಾಯ್ಕ್, ಇನ್ಸ್’ಪೆಕ್ಟರ್’ಗಳು ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

80000841 1004513256576761 7285180156618997760 n.jpg? nc cat=101& nc eui2=AeHztZV1tgA0 c6McvvAdh1iQd 6 5Y9PtdwtPS57O2cipQgW8cZDB9 Iit7eWTXbSADxOUbMO8hHef7ZfZRl5eM2RubWciVLXj6 LGqiUwVWQ& nc ohc=cgsM0TxOZu8AQnd8WANgDkGgftKwNJZy4VMVb8q4kMtGMDoUVgeFOSX2w& nc ht=scontent.fblr11 1
81031254 1004513389910081 2819007363892117504 n.jpg? nc cat=103& nc eui2=AeGHlYIOTLr1KNsgFOtPGzPxh4sWc1Qbfs9GpNgHu1lQCX0K5DLsvWrofnmc6hG TjbXZhURYaIdO PFqxhUt9amjkemnxaQGsufAtDkgEl89A& nc ohc=UVhfVnRteroAQkXxjYIwB3V58eHyDWE1K9LIS5KkPrBrlMZ ylikeMmZA& nc ht=scontent.fblr11 1
80276573 1004513433243410 1075130249487843328 n.jpg? nc cat=100& nc eui2=AeF6EPM1jgxxUJUttNC55sEycaX35wYDUz3XRkYRpbRhtTTk15t57BFLLVI2ogw9BQwSwJiD TcLPKU Fvm dgfMDSL1jy1k0akJd27JbHICpw& nc ohc=W9TduOU7h 4AQmamSC MKCrjO9lz8 7yqNm0BPgLrbBWeHfXr yxRXsew& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Congress cancels the protest against CAA in Shimoga as the district administration has imposed 144 section in the district.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment