ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಕ್ಕೆ (Birthday) ಶುಭಕೋರಿದರಾ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಸು ಸಿಡಿಮಿಡಿಗೊಂಡರು. ಅಲ್ಲದೆ ಎಲ್ಲವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಡಬೇಕು ಎಂದು ತಿಳಿಸಿದರು.
ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ಪತ್ರಕರ್ತರು, ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ರಾ ಎಂದು ಪ್ರಶ್ನಿಸಿದರು. ಆಗ ಈಶ್ವರಪ್ಪ, ಇವತ್ತು ನಾನು ಈ ಸ್ಥಿತಿಯಲ್ಲಿ ಇರಲು ಯಡಿಯೂರಪ್ಪ ಕೂಡ ಕಾರಣ ಎಂದರು.
ಈಶ್ವರಪ್ಪ ಏನೆಲ್ಲ ಹೇಳಿದರು?
ಯಡಿಯೂರಪ್ಪ ನನ್ನ ಗುರು. ಅವರಿಗೆ ನಾನು ವಿಷ್ ಮಾಡಲೇಬೇಕಾ? ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೋಗಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳುತ್ತೇವಾ? ನಾನು ಇವತ್ತು ಹೀಗಿರಲು ಆರ್ಎಸ್ಎಸ್, ನನ್ನ ತಂದೆ, ತಾಯಿ ಮತ್ತು ಯಡಿಯೂರಪ್ಪ ಕಾರಣ. ತಂದೆ – ತಾಯಿಯನ್ನು ನಾವು ಮರೆಯಲು ಸಾಧ್ಯವೆ. ಈಗಲು ಪ್ರತಿ ದೀಪಾವಳಿಗೆ ಹಿರಿಯರ ಪೂಜೆಯಂದು ನನ್ನ ತಂದೆ – ತಾಯಿಗೆ ನಾನು ದೀಪ ಬೆಳಗುತ್ತೇನೆ. ಹಾಗೆಯೇ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನು ನಾನು ಮರೆತಿಲ್ಲ ಎಂದರು.

ಪ್ರತಿಯೊಂದರಲ್ಲು ರಾಜಕೀಯ ನೋಡುವುದು ಸರಿಯಲ್ಲ. ಮೊದಲು ಈ ದೃಷ್ಟಿಕೋನ ಬದಲಾಗಬೇಕು ಎಂದು ಸಿಡಿಮಿಡಿಗೊಂಡರು.
ಇದನ್ನೂ ಓದಿ » ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್ ಕೊನೆಯುಸಿರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200