ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದರು ಸಚಿವ ಖಾದರ್, ದಿಢೀರ್ ಬಂದರು ಈಶ್ವರಪ್ಪ, ಮುಂದೇನಾಯ್ತು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019

ಸ್ಮಾರ್ಟ್ ಸಿಟಿ ಯೋಜನೆಯ ಶಂಕುಸ್ಥಾಪನೆಗೆ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಖಾದರ್ ಅವರು, ಅಲ್ಲಿಯೇ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಮೊದಲು ಶಿವಮೊಗ್ಗ ಸಿಟಿಯ ಅಭಿವೃದ್ಧಿ ವಿಚಾರಗಳ ಕುರಿತು ಪ್ರಸ್ತಾಪಿಸಿದರು. ನಂತರ ಮಾತು ರಾಜಕೀಯದತ್ತ ಹೊರಳಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ, ಟಿಪ್ಪಣಿ ಮಾಡುತ್ತಿದ್ದರು.

52889898 797317427296346 3464140923816902656 n.jpg? nc cat=106& nc oc=AQmCnq xn02u8WiphqvaYsSuFZCB52dFhWax2UVL0Id2HnoL97 2qOiuGG OSfsKeTk& nc ht=scontent.fixe1 1

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಷ್ಟೇ ಇದ್ದರು. ಇದೇ ವೇಳೆ, ಸಚಿವ ಖಾದರ್ ಅವರು ಬಂದಿರುವ ವಿಚಾರ ತಿಳಿದು, ಶಾಸಕ ಕೆ.ಎಸ್.ಈಶ್ವರಪ್ಪ ಪ್ರವಾಸಿ ಮಂದಿರಕ್ಕೆ ಬಂದರು. ಆಗ ಖಾದರ್ ಅವರು ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದರು. ಇದು ಈಶ್ವರಪ್ಪ ಕಿವಿಗೆ ಬಿದ್ದಿದ್ದೇ ತಡ, ಅಲ್ರಿ ಸ್ವಾಮಿ, ವಿಧಾನಸೌಧದಲ್ಲೂ ಬೈತೀರ.. ಇಲ್ಲಿ ಬಂದೂ ಬೈತೀರಲ್ಲ.. ಏನ್ರಿ ಇದು ಅಂತಾ ಪ್ರಶ್ನಿಸಿದರು.

52585340 797317403963015 678027228386164736 n.jpg? nc cat=111& nc oc=AQkEA5lwDr9ne7OnKcLI0oFVyXQ9L krjc5ThdB2W0RwHXBUYjWRukpd2bdwgwfGybg& nc ht=scontent.fixe1 1

ಒಂದೆರಡು ಕ್ಷಣ ತಬ್ಬಿಬ್ಬಾದ ಸಚಿವ ಖಾದರ್, ಪತ್ರಿಕಾಗೋಷ್ಠಿ ಮುಗಿಸಿ ಬರುತ್ತೇನೆ ಎಂದರು. ಬೇಗ ಮುಗಿಸಿ ಬನ್ನಿ ಎಂದು ಈಶ್ವರಪ್ಪ ಪಕ್ಕದ ಕೋಣೆಗೆ ತೆರಳಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment