SHIVAMOGGA LIVE NEWS, 29 JANUARY 2025
ಶಿವಮೊಗ್ಗ : ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರನ್ನು (president) ಘೋಷಿಸಲಾಗಿದೆ. ಈ ಹಿಂದೆ ನಗರ ಅಧ್ಯಕ್ಷರಾಗಿದ್ದ ಎನ್.ಕೆ.ಜಗದೀಶ್ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಲೈವ್
ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣೆ ನಡೆಯಿತು. ಜಿಲ್ಲಾಧ್ಯಕ್ಷರು, ಸಂಸದ, ಶಾಸಕರು, ಕೋರ್ ಕಮಿಟಿ ಸದಸ್ಯರು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಎನ್.ಕೆ.ಜಗದೀಶ್ ನೂತನ ಅಧ್ಯಕ್ಷರಾಗಿದ್ದಾರೆ. ರಾಜ್ಯಕ್ಕೆ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಮಂಡಲಗಳಿಗೆ ನೂತನ ಅಧ್ಯಕ್ಷರ ಆಯ್ಕೆ
ಇನ್ನು, ಜಿಲ್ಲೆಯ 10 ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸದಲಾಗಿದೆ.
ತೀರ್ಥಹಳ್ಳಿ | ನವೀನ್ ಹೆದ್ದೂರು |
ಹೊಸನಗರ | ಕೆ.ವಿ.ಸುಬ್ರಹ್ಮಣ್ಯ |
ಸಾಗರ ನಗರ | ಕೆ.ಆರ್.ಗಣೇಶ್ ಪ್ರಸಾದ್ |
ಸಾಗರ ಗ್ರಾಮಾಂತರ | ದೇವೇಂದ್ರ ಯಲಕುಂದ್ಲಿ |
ಸೊರಬ | ಪ್ರಕಾಶ್ ಅಗಸನಹಳ್ಳಿ |
ಶಿಕಾರಿಪುರ | ಹನುಮಂತಪ್ಪ.ಎಸ್ |
ಭದ್ರಾವತಿ | ಜಿ.ಧರ್ಮಪ್ರಸಾದ್ |
ಹೊನ್ನೆಹೊಳೆನ್ನೂರು | ಮಲ್ಲೇಶಪ್ಪ.ಎಂ |
ಶಿವಮೊಗ್ಗ ಗ್ರಾಮಾಂತರ | ಎಸ್.ಇ.ಸುರೇಶ್ |
ಶಿವಮೊಗ್ಗ ನಗರ | ಡಿ.ಮೋಹನ್ ರೆಡ್ಡಿ |
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಜೋರು, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200