ಶಿವಮೊಗ್ಗ ಜೆಡಿಎಸ್‌ನತ್ತ ಎಲ್ಲರ ದೃಷ್ಟಿ, ಪ್ರತಿ ಹೆಜ್ಜೆ ಮೇಲೂ ಪ್ರತಿ ಪಕ್ಷಗಳ ನಿಗಾ, ಏನೇನಾಗ್ತಿದೆ ಪಕ್ಷದಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 APRIL 2023

ELECTION NEWS : ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಶಿವಮೊಗ್ಗದ ಜೆಡಿಎಸ್‌ನಲ್ಲಿ (JDS party) ದೊಡ್ಡ ಬದಲಾವಣೆ ಗೋಚರಿಸುತ್ತಿದೆ. ದಿನೇ ದಿನೆ ಕಾರ್ಯಕರ್ತರ ಸೇರ್ಪಡೆ ಹೆಚ್ಚುತ್ತಿದೆ. ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ELECTION NEWS LOGO jpg

ಬಿಜೆಪಿ ತೊರೆದು ಆಯನೂರು ಮಂಜುನಾಥ್‌, ಕಾಂಗ್ರೆಸ್‌ ಬಿಟ್ಟು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ಆಯನೂರು ಮಂಜುನಾಥ್‌ ಅವರೆ ಜೆಡಿಎಸ್‌ ಅಭ್ಯರ್ಥಿ. ಈ ಬೆಳವಣಿಗೆಯಿಂದಾಗಿ, ತಳ ಹಿಡಿದಿದ್ದ ಪಕ್ಷದ ಸಂಘಟನೆ ದಿಢೀರ್‌ ಜಿಗಿತುಕೊಂಡಿದೆ.

ಕಾರ್ಯಕರ್ತರ ದಂಡು ಸೇರ್ಪಡೆ

ಜೆಡಿಎಸ್‌ ಪಕ್ಷಕ್ಕೆ (JDS party) ಶಿವಮೊಗ್ಗದಲ್ಲಿ ವಿಶಾಲ ಕಚೇರಿ ಇದೆ. ಆದರೆ ಸಂಘಟನೆ ಮಾತ್ರ ನೆಲಕಚ್ಚಿತು. ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಅವರು ಶಿವಮೊಗ್ಗಕ್ಕೆ ಬಂದಾಗಲಷ್ಟೆ ಕಾರ್ಯಕರ್ತರು ಪಕ್ಷದ ಕಚೇರಿ ಕಾಲಿಡುತ್ತಿದ್ದರು. ಚುನಾವಣೆ ಹೊತ್ತಲ್ಲೂ ಬಹುತೇಕ ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಕಾಣಿಸುತ್ತಿರಲಿಲ್ಲ. ಆದರೆ ಈ ಬಾರಿ ಎಲ್ಲವೂ ಬದಲಾಗಿದೆ.

KB-Prasanna-Kumar-Ayanuru-Manjunath-M-Srikanth-in-JDS-Party

ಆಯನೂರು ಮಂಜುನಾಥ್‌ ಮತ್ತು ಕೆ.ಬಿ.ಪ್ರಸನ್ನ ಕುಮಾರ್‌ ಅವರ ಸೇರ್ಪಡೆಯ ಬೆನ್ನಿಗೆ ಜೆಡಿಎಸ್‌ನಲ್ಲಿ ಹೊಸ ಹುರುಪು ಕಾಣಿಸಿದೆ. ಕಳೆದೊಂದು ವಾರದಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರು ಜೆಡಿಎಸ್‌ನಲ್ಲಿ ಸಂಚಲನ ಮೂಡಿಸಿದೆ.

ಸಂಚಲನದ ಜೊತೆಗೆ ಚಾಲೆಂಜ್‌

ʼಜೆಡಿಎಸ್‌ ಪಕ್ಷಕ್ಕೆ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ತಳಮಟ್ಟದಿಂದ ಪಕ್ಷ ಬಲವರ್ಧನೆಯಾಗಿದೆ. ಮೇ 1ರ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೆಡಿಎಸ್‌ ಪರವಾದ ಅಲೆ ಕಾಣಸಿಗಲಿದೆʼ ಎಂದು ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರು ತಿಳಿಸಿದ್ದಾರೆ.

JDS-Party-Office-Shimoga

ದೊಡ್ಡ ಸಂಖ್ಯೆಯ ಕಾರ್ಯಕರ್ತರ ಸೇರ್ಪಡೆ ಬೆನ್ನಿಗೆ ಹಳೆ ಕಾರ್ಯಕರ್ತರು ಪಕ್ಷದ ಕಚೇರಿ ಆಗಮಿಸುತ್ತಿದ್ದಾರೆ. ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಹಳೆ ಕಾರ್ಯಕರ್ತರು ಮತ್ತು ಹೊಸ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದು ಪಕ್ಷದ ಮುಖಂಡರಿಗೆ ಸವಾಲಾಗಿದೆ. ಈ ಹಿನ್ನೆಲೆ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌, ಅಭ್ಯರ್ಥಿ ಆಯನೂರು ಮಂಜುನಾಥ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು‌ ಆಗಾಗ ಸಮನ್ವಯ ಸಭೆಗಳನ್ನು ನಡೆಸುತ್ತಿದ್ದಾರೆ.

ಉತ್ಸಾಹದಲ್ಲಿ ಫಿಲ್ಡಿಗಿಳಿದ ಕಾರ್ಯಕರ್ತರು

ಇನ್ನು, ಈ ಬಾರಿ ಶಿವಮೊಗ್ಗದಲ್ಲಿ ಜೆಡಿಎಸ್‌ ಧ್ವಜ ಹಾರಿಸಬೇಕು ಎಂಬ ಗುರಿಯೊಂದಿಗೆ ಕಾರ್ಯಕರ್ತರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ವಾರ್ಡ್‌ವಾರು ಮನೆ ಮನೆಗೆ ತೆರಳಿ ಕರಪತ್ರ ವಿತರಣೆ ಮಾಡಿ, ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರ ಪರವಾಗಿ ಕ್ಯಾಂಪೇನ್‌ ನಡೆಸಲಾಗುತ್ತಿದೆ.

JDS party Ayanuru Manjunath in Shimoga

ಜೆಡಿಎಸ್‌ ನಡೆ ಬಗ್ಗೆ ಕಣ್ಣಿಟ್ಟ ಬಿಜೆಪಿ, ಕಾಂಗ್ರೆಸ್‌

ಶಿವಮೊಗ್ಗ ನಗರದಲ್ಲಿ ಜೆಡಿಎಸ್‌ ಪಕ್ಷವನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಪರಿಗಣಿಸಿದ್ದವು. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಮೇಲ್ನೋಟಕ್ಕೆ ಜೆಡಿಎಸ್‌ ತಮ್ಮ ಪ್ರತಿಸ್ಪರ್ಧಿಯೇ ಅಲ್ಲ ಎಂದು ಇವರೆಡೂ ಪಕ್ಷಗಳು ಹೇಳುತ್ತಿವೆ. ಆದರೆ ಜೆಡಿಎಸ್‌ ಪಕ್ಷದ ಪ್ರತಿ ಹೆಜ್ಜೆ ಕುರಿತು ಸೂಕ್ಷ್ಮ ಕಣ್ಣಿಟ್ಟಿವೆ.

ʼಪ್ರಸನ್ನ ಕುಮಾರ್‌ ಅವರು ಜೆಡಿಎಸ್‌ ಸೇರ್ಪಡೆಯಾಗಿರುವುದು, ಹಲವರು ಅವರ ಹಿಂದೆಯೇ ಕಾಂಗ್ರೆಸ್‌ ತೊರೆದಿರುವುದರಿಂದ ಪಕ್ಷಕ್ಕೇನು ನಷ್ಟವಿಲ್ಲʼ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್‌ ಆಂತರ್ಯದಲ್ಲಿ ಕಾರ್ಯಕರ್ತರು ಕೈ ಬಿಟ್ಟು ತೆನೆ ಹೊರತ್ತಿರುವುದು ಗಂಭೀರ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ – ಶಿವಮೊಗ್ಗದ ಬಿಜೆಪಿ ಸಮಾವೇಶದಲ್ಲಿ ತಮಿಳುನಾಡು ನಾಡಗೀತೆ

ಇನ್ನು, ಬಿಜೆಪಿ ಕೂಡ ಮೇಲ್ನೋಟಕ್ಕೆ ಜೆಡಿಎಸ್‌ ಮತ್ತು ಅದರ ಅಭ್ಯರ್ಥಿ ಆಯನೂರು ಮಂಜುನಾಥ್‌ ದೊಡ್ಡ ಪೆಟ್ಟು ಕೊಡಲಾರರು ಎಂದು ತೋರ್ಪಸುತ್ತಿದೆ. ಆದರೆ ಬಿಜೆಪಿ ನಾಯಕರು ʼಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಇದೆʼ ಎಂದು ಹೇಳುವ ಮೂಲಕ ಜೆಡಿಎಸ್‌ ಪಕ್ಷವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸೂಚ್ಯವಾಗಿ ತಿಳಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಶಿವಮೊಗ್ಗ ಕ್ಷೇತ್ರ ಕುತೂಹಲ ಮೂಡಿಸಿದೆ. ನಗರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಮರು ಜೀವ ನೀಡಿದೆ.

shivamogga live news whatsappa number

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment