ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 01 FEBRUARY 2021
ಇಂಡಿಯಾ ಬುಕ್ ಆಫ್ ರೆಕಾರ್ಡಸ್ ಪ್ರಶಸ್ತಿ ಪಡೆದ ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ಪ್ರತೀಕ್ಷಾಗೆ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಪ್ರಶಸ್ತಿ ಪತ್ರ ನೀಡಿದರು.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಪ್ರಶಸ್ತಿ ಪತ್ರ ವಿತರಿಸಿದ ಶಾಸಕ ಸಂಗಮೇಶ್ವರ್, ಪ್ರತೀಕ್ಷಾ ಬಯಸುವ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು. ಈ ವಯಸ್ಸಿನಲ್ಲಿ ಈಕೆಯ ಸಾಧನೆ ಕ್ಷೇತ್ರದ ಜನರಿಗೆ ಸಂತಸ ಮೂಡಿಸಿದೆ ಎಂದು ತಿಳಿಸಿದರು.
ಯಾರಿದು ಪ್ರತೀಕ್ಷಾ? ಏನಿದು ಸಾಧನೆ?
ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಪ್ರಧಾನಿಯ ಹೆಸರನ್ನು ಪಟಪಟನೆ ಹೇಳುತ್ತಾಳೆ ಮೂರು ವರ್ಷದ ಪ್ರತೀಕ್ಷಾ. ದೇಶಗಳ ಹೆಸರು, ರಾಷ್ಟ್ರಗೀತೆ, ರಾಷ್ಟ್ರಧ್ವಜ, ವಾಹನಗಳು, ದೇವರು ಸೇರಿದಂತೆ ವಿವಿಧ ವಿಷಯಗಳ ಕುರಿತು ಅರಳು ಹುರಿದಂತೆ ಹೇಳುತ್ತಾಳೆ ಪ್ರತೀಕ್ಷಾ.
ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಆನ್ಲೈನ್ ಸ್ಪರ್ಧೆಯಲ್ಲಿ ಪ್ರತೀಕ್ಷಾ ಗೆಲುವು ಸಾಧಿಸಿದ್ದಾರೆ. ಅಂಚೆ ಮೂಲಕ ಪ್ರಶಸ್ತಿ ಪತ್ರ ಬಂದಿದೆ.
ಪ್ರತೀಕ್ಷಾ, ಅಂತರಗಂಗೆ ಗ್ರಾಮದ ಪ್ರದೀಪ್ ಕುಮಾರ್, ಸಿಂಧು ದಂಪತಿಯ ಪುತ್ರಿ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಶಿವಮೊಗ್ಗ ಲೈವ್.ಕಾಂ