SHIVAMOGGA LIVE NEWS | BUS | 16 ಮೇ 2022
ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವಾಗ ಮಹಿಳೆಯೊಬ್ಬರ ಬ್ಯಾಗ್’ನಿಂದ ಚಿನ್ನಾಭರಣ, ನಗದು, ಎಟಿಎಂ ಕಾರ್ಡ್ ಇದ್ದ ಪರ್ಸ್ ಕಳವು ಮಾಡಲಾಗಿದೆ.
ಶಿವಮೊಗ್ಗದ ಅನಿತಾ ಎಂಬುವವರಿಗೆ ಸೇರಿದ ಬ್ಯಾಗ್’ನಿಂದ ಪರ್ಸ್ ಕಳವು ಮಾಡಲಾಗಿದೆ. ದಾವಣಗೆರೆಗೆ ತೆರಳುವ ಬಸ್ ಹತ್ತುತ್ತಿದ್ದಾಗ ಘಟನೆ ಸಂಭವಿಸಿದೆ.
ಅನಿತಾ ಅವರು ಬಸ್ ಹತ್ತುವಾಗ ಬಸ್ಸಿನ ಡೋರಿನಲ್ಲಿ ಅವರ ಬ್ಯಾಗಿನ ಜಿಪ್ ತೆಗೆದು, ಪರ್ಸ್ ಕಳ್ಳತನ ಮಾಡಲಾಗಿದೆ. ಪರ್ಸಿನಲ್ಲಿ ಎಟಿಎಂ ಕಾರ್ಡ್, 5 ಸಾವಿರ ರೂ. ನಗದು, 30 ಗ್ರಾಂ ಚಿನ್ನದ ಚೈನ್, ವಾಹನದ ಆರ್.ಸಿ ಪುಸ್ತಕ ಮತ್ತು ಇತರೆ ವಸ್ತುಗಳಿದ್ದವು. ಅವುಗಳ ಮೌಲ್ಯ 1.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರು, ನಿಮ್ಮಾ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.