ಶಿವಮೊಗ್ಗ ಲೈವ್.ಕಾಂ | SHIRALAKOPPA | 23 ಅಕ್ಟೋಬರ್ 2019
ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಕೂಡಲೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಹಾನಿ ಪ್ರದೇಶಗಳಾದ ಶಿರಾಳಕೊಪ್ಪ, ಬೆಲವಂತನಕೊಪ್ಪ, ಬಳ್ಳಿಗಾವಿ ಮತ್ತು ಬಸವನಂದಿಹಳ್ಳಿ ಗ್ರಾಮಗಳಿಗೆ ಸಂಸದ ರಾಘವೇಂದ್ರ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. 2ನೇ ಭಾರಿ ಮಳೆಯಿಂದಾಗಿ ಕೆರೆಕಟ್ಟೆ ಒಡೆದು 10 ಕೋಟಿ ರೂ.ಗಿಂತಲು ಅಧಿಕ ಹಾನಿಯಾಗಿದೆ. 60 ವರ್ಷದಲ್ಲಿ ಇಂತಹ ಮಳೆ ಆಗಿರಲಿಲ್ಲ ಎಂದರು.
ಕೋಡಿ ಒಡೆದಿರುವ ಬಸವನಂದಿಹಳ್ಳಿ ಕೆರೆ ವೀಕ್ಷಿಸಿದ ಸಂಸದ ರಾಘವೇಂದ್ರ, ಈ ಭಾಗದಲ್ಲಿ ಎರಡನೆ ಬಾರಿಗೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಮೊದಲು ಜೋಳ ಬೆಳೆದಿದ್ದರು. ಭಾರಿ ಮಳೆಯಿಂದಾಗಿ ಜೋಳ ಹಾಳಾಯಿತು. ನಂತರ ಭತ್ತದ ನಾಟಿ ಮಾಡಿದ್ದರು. ಆದರೆ ಮಳೆಯಿಂದಾಗಿ ಭತ್ತ ಕೂಡ ಹಾನಿಯಾಗಿದೆ. ಸುಮಾರು 200 ಹೆಕ್ಟೇರ್’ನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಗಡಿ ಅಶೋಕ, ತಾಲೂಲು ಪಂಚಾಯಿತಿ ಅಧ್ಯಕ್ಷ ಶಂಭು, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]