SHIVAMOGGA LIVE NEWS | 18 APRIL 2024
BHADRAVATHI : ಲಾರಿ ಡಿಕ್ಕಿಯಾಗಿ ರೈಲ್ವೆ ಸೇತುವೆಗೆ ಹಾನಿಯಾಗಿದ್ದು, ರಿಪೇರಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆ ಭದ್ರಾವತಿ ಅಂಡರ್ಪಾಸ್ನಲ್ಲಿ ಒಂದು ಕಡೆ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಕಳೆದ ರಾತ್ರಿ ಲಾರಿ ಡಿಕ್ಕಿಯಾಗಿ ಅಂಡರ್ ಪಾಸ್ ಮುಂದಿದ್ದ ಹ್ಯಾಂಗರ್ ಮುರಿದಿದೆ. ರೈಲ್ವೆ ಮೇಲ್ಸೇತುವೆಗೂ ಹಾನಿಯಾಗಿತ್ತು. ಇದರಿಂದ ಹಳಿಗಳು ಏರುಪೇರಾಗಿತ್ತು. ರೈಲ್ವೆ ಇಲಾಖೆ ಸಿಬ್ಬಂದಿ ತುರ್ತು ರಿಪೇರಿ ಕಾರ್ಯ ನಡೆಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಈಗ ಮತ್ತಷ್ಟು ರಿಪೇರಿ ಕಾರ್ಯ ಬಾಕಿ ಇದ್ದು, ಅದನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆ ರೈಲ್ವೆ ಅಂಡರ್ಪಾಸ್ನಲ್ಲಿ ಒಂದೇ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ – ಲಾರಿ ಡಿಕ್ಕಿ, ಭದ್ರಾವತಿಯಲ್ಲಿ ರೈಲ್ವೆ ಹಳಿ ಏರುಪೇರು, ಜನಶತಾಬ್ದಿ ಸೇರಿ 2 ರೈಲು ಎರಡು ಗಂಟೆ ವಿಳಂಬ