SHIVAMOGGA LIVE NEWS | 12 AUGUST 2023
SHIMOGA : ತುಂಗಾ ಜಲಾಶಯದ (Tunga Dam) ಮುಂಭಾಗ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನಾಪತ್ತೆಯಾದ ಯುವಕನನ್ನು ಶಿವಮೊಗ್ಗದ ಮಿಳಘಟ್ಟದ ಹರೀಶ್ ಎಂದು ಹೇಳಲಾಗುತ್ತಿದೆ. ಜಲಾಶಯದ ಮುಂಭಾಗ ವೀಕ್ಷಣೆಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ಆದರೆ ಕೆಲವರು ಚಾನಲ್ ಏರಿ ಮೇಲೆ ಹೋಗಿ ತುಂಗಾ ಜಲಾಶಯದ ಮುಂಭಾಗಕ್ಕೆ ತಲುಪುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಭಾರತ – ಪಾಕ್ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್, ಸದ್ಯದಲ್ಲೇ ಬರುತ್ತೆ ಫೈಟರ್ ವಿಮಾನ, ಯಾಕೆ?
ಇದೇ ಮಾರ್ಗದಲ್ಲಿ ತೆರಳಿದ್ದ ಹರೀಶ್ ಎಂಬಾತ ಈಗ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಇಡಿ ದಿನ ಶೋಧ ಕಾರ್ಯ ನಡೆಸಿದರು. ಇವತ್ತು ಕೂಡ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಇದೆ.