ಶಿವಮೊಗ್ಗ ಲೈವ್.ಕಾಂ | SHIKARIPURA NEWS | 7 ಡಿಸೆಂಬರ್ 2021
ಪಟ್ಟಣದ ಬಸ್ ನಿಲ್ದಾಣ ಪಕ್ಕದ ಪೆಟ್ರೋಲ್ ಬಂಕ್ ರಸ್ತೆಗೆ ಕರ್ನಾಟಕರತ್ನ ಪುನೀತ್ ರಾಜ್ಕುಮಾರ್ ಹೆಸರಿಡುವಂತೆ ಆಗ್ರಹಿಸಿ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಚಲನಚಿತ್ರ ನಿರ್ದೇಶಕ ಇ.ಬಸವರಾಜ್ ಮಾತನಾಡಿ, ಪುನೀತ್ ರಾಜ್ಕುಮಾರ್ ಕೇವಲ ನಟರಾಗಿರದೆ ಸಾಮಾಜಿಕ ಕಳಕಳಿಯ ದ್ಯೋತಕವಾಗಿದ್ದರು. ಅವರ ಸಹೃದಯತೆಯೇ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತ್ತು. ಅವರ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. ಅವರೊಬ್ಬ ಆದರ್ಶ ನಟ ಎಂದರು.
ತಂದೆಯವರಿಂದ ಕಲಿತ ಸಂಸ್ಕಾರ ಅವರಲ್ಲಿ ವಿಶಿಷ್ಟತೆಯನ್ನು ತಂದುಕೊಟ್ಟಿತ್ತು. ಕಲೆಯ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ತಮ್ಮ ಗಳಿಕೆಯಲ್ಲಿ ಸಮಾಜಕ್ಕೋಸ್ಕರ ಒಂದಷ್ಟನ್ನು ತೆಗೆದಿಟ್ಟಿದ್ದರು. ಅವರು ಸದಾ ನಗು ಮೊಗದಲ್ಲಿರುತ್ತಿದ್ದರು. ನಗುವಿನ ಮೂಲಕ ಜಗತ್ತನ್ನು ಗೆದ್ದರು. ಅಂತಹವರ ಹೆಸರನ್ನು ಪೆಟ್ರೋಲ್ ಬಂಕ್ ರಸ್ತೆಗೆ ಇಡುವ ಮೂಲಕ ಗೌರವ ಸಲ್ಲಿಸಬೇಕು ಎಂದಯ ತಿಳಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಕಸಾಪ ಮಾಜಿ ಅಧ್ಯಕ್ಷ ಶಿವರಂಜಿನಿ ಸುದರ್ಶನ್, ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಪಾರು ಸ್ವಾಮಿ, ಯುವ ಕಾಂಗ್ರೆಸ್ ಮುಖಂಡ ಗೋಣಿ ಸಂದೀಪ್, ಗಿಡ್ಡಪ್ಪ, ಸುಬ್ರಹ್ಮಣ್ಯ ಇತರರಿದ್ದರು.