SHIVAMOGGA LIVE NEWS | 31 ಮಾರ್ಚ್ 2022
ಶಿವಮೊಗ್ಗ- ಭದ್ರಾವತಿ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.34ರಲ್ಲಿ ರೈಲ್ವೆ ಓವರ್ ಬ್ರಿಡ್ಜ್ (ಆರ್ಒಬಿ) ಕಾಮಗಾರಿ ನಡೆಯುತ್ತಿದೆ.
ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಿರಲು ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಪರ್ಯಾಯ ಮಾರ್ಗ ಯಾವುದು?
ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ಮಿನಿ ನಗರ ಸಾರಿಗೆ ಬಸ್ಗಳು, ಕಾರು, ಟ್ಯಾಕ್ಸಿ, ಮತ್ತು ಲಘು ವಾಹನಗಳು ಕಡದಕಟ್ಟೆ ವಿಧ್ಯಾಧಿರಾಜ ಸಭಾಭವನ ಪಕ್ಕದ ರಸ್ತೆಯಿಂದ ಹೆಬ್ಬಂಡಿ ಮಾರ್ಗವಾಗಿ ಲಕ್ಷ್ಮಿಪುರ ಹಾಗೂ ಬಿಳಿಕಿ ಕ್ರಾಸ್ ಮೂಲಕ ಸಂಚರಿಸುವುದು.
ಎಲ್ಲಾ ರೀತಿಯ ಭಾರಿ ವಾಹನಗಳು ಉಂಬ್ಳೆಬೈಲ್ ರಸ್ತೆ ಮೂಲಕ-ಕೃಷ್ಣಪ್ಪ ವೃತ್ತ-ಸಿದ್ದಾಪುರ ಸರ್ಕಲ್ ಬಿಳಿಕಿ ಕ್ರಾಸ್ ಮುಖಾಂತರ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200