ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಮೇ 2020
ಬಂಕ್ನಲ್ಲಿ ಪೆಟ್ರೋಲ್ ಹಾಸಿಕೊಂಡು ಹಣ ಕೊಡದೆ, ಸಿಬ್ಬಂದಿಯನ್ನೇ ಬದೆರಿಸಿ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಐವರು ಈಗ ಕಂಬಿ ಎಣಿಸುವಂತಾಗಿದೆ.
ಸವಳಂಗ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಐವರು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಹಣ ನೀಡುವ ಬದಲು ಸಿಬ್ಬಂದಿಯನ್ನೇ ಬೆದರಿಸಿ 4500 ರೂ. ದರೋಡೆ ಮಾಡಿಕೊಂಡು ಹೋಗಿದ್ದವರು.
ಮೋಜು, ಮಸ್ತಿ, ಐಷಾರಾಮಿ ಬದುಕಿನ ಆಸೆ
ಶಿವಮೊಗ್ಗದ ನಾಸೀಜ್, ವಿಜಯ್, ರಾಹಿಲ್, ನಿತಿನ್ ಮತ್ತು ನೈಫ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಎರಡು ಬೈಕ್, ಒಂದು ಲಾಂಗು, 4500 ರೂ. ನಗದು ವಶಕ್ಕೆ ಪಡೆಯಲಾಗಿದೆ. ಇದು ಇವರ ಮೊದಲ ಪ್ರಕರಣವಾಗಿದೆ. ಐಷಾರಾಮಿ ಜೀವನ ನಡೆಸುವುದಕ್ಕಾಗಿ ದರೋಡೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]