SHIVAMOGGA LIVE | 30 JULY 2023
SAGARA : ವಿಷ ಸೇವಿಸಿ ಅಸ್ವಸ್ಥನಾಗಿದ್ದ ಎಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಕೇವಿ ಗ್ರಾಮದ ಶರತ್ (26) ಸಾವನ್ನಪ್ಪಿದ್ದಾನೆ (Succumbed). ಈ ಸಂಬಂಧ ಸಾಗರ ಪಟ್ಟಣ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಗಲಾಟೆಯಾಗಿ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದ ಸಂಬಂಧ ಪೋಷಕರು ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರು. ಜು.23ರಂದು ತಂದೆ, ತಾಯಿಯೊಂದಿಗೆ ಬಂದಿದ್ದ ಶರತ್ ಜೇಬಿನಲ್ಲಿದ್ದ ಕೀಟನಾಶಕ ತೆಗೆದು ಹಠಾತ್ ಸೇವಿಸಿದ್ದ. ಪೊಲೀಸರು ಕೂಡಲೆ ಆತನನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ – ಸಾಗರದಲ್ಲಿ 50 ಲಕ್ಷ ರೂ. ವೆಚ್ಚದ ಕುಡಿಯುವ ನೀರು ತಪಾಸಣಾ ಘಟಕ, ಉದ್ಘಾಟನೆ ಬಳಿಕ MLA ಹೇಳಿದ 3 ಪ್ರಮುಖಾಂಶ
ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶರತ್ ಮೃತಪಟ್ಟಿದ್ದಾನೆ.