ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಅಕ್ಟೋಬರ್ 2020
ಗಾಂಧಿ ಜಯಂತಿ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಶಿವಮೊಗ್ಗದಲ್ಲಿ ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ ಆಯೋಜಿಸಲಾಗಿದೆ. ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸತ್ಯಾಗ್ರಹ ಮಾಡುತ್ತಿದ್ದಾರೆ. ಇವತ್ತು ಸಂಜೆವರೆಗೂ ಸತ್ಯಾಗ್ರಹ ನಡೆಯಲಿದೆ.
https://www.facebook.com/liveshivamogga/videos/738559277001116/?t=0
ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸತ್ಯಾಗ್ರಹ ಆರಂಭಿಸಲಾಯಿತು. ಬಳಿಕ ಮಾತನಾಡಿದ ಅಂಕಣಕಾರ ಸುಂದರ್ ರಾಜ್ ಅವರು, ಗಾಂಧೀಜಿ ಅವರ ಧ್ಯೇಯಗಳು, ಭಾರತದ ಕುರಿತ ಕಲ್ಪನೆಗಳನ್ನು ವಿವರಿಸಿದರು.
ಸಂಜೆ 4 ಗಂಟೆವರೆಗೆ ಈ ಸತ್ಯಾಗ್ರಹ ನಡೆಯಲಿದೆ. ಈ ವೇಳೆ ಆಹಾರ ಸೇವಿಸದೆ ಮಹಾತ್ಮ ಗಾಂಧೀಜಿ ಅವರ ವಿಚಾರಗಳ ಸ್ಮರಣೆ, ಭಜನೆ ನೆರವೇರಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]