SHIVAMOGGA LIVE NEWS | 22 APRIL 2024
BYKODU : ತಾಂತ್ರಿಕ ದೋಷದಿಂದ ಸಿಗಂದೂರು ಲಾಂಚ್ಗಳು ಏಕಾಏಕಿ ಸ್ಥಗಿತಗೊಂಡಿವೆ. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರು ಸಂಕಷ್ಟಕ್ಕೀಡಾದರು.
ಶರಾವತಿ ಹಿನ್ನೀರು ಭಾಗದ ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ ಸಂಚಾರಕ್ಕೆ ಮೂರು ಲಾಂಚ್ಗಳಿವೆ. ಈ ಪೈಕಿ ಎರಡು ಲಾಂಚ್ಗಳು ತಾಂತ್ರಿಕ ದೋಷದಿಂದ ಭಾನುವಾರ ಸ್ಥಗಿತಗೊಂಡಿದ್ದವು. ಬೇಸಿಗೆ ರಜೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸಿಗಂದೂರು ದೇಗುಲಕ್ಕೆ ಭೇಟಿ ನೀಡಿದ್ದರು. ಲಾಂಚ್ ಸಿಗದೆ ಪ್ರವಾಸಿಗರು ಸಂಕಷ್ಟಕ್ಕೀಡಾದರು. ಇನ್ನು, ಲಾಂಚ್ ಮೇಲೆ ಅವಲಂಬಿತವಾಗಿರುವ ಸ್ಥಳೀಯರು ಕೂಡ ಪೇಚಾಡುವಂತಾಯಿತು. ಲಾಂಚ್ಗಳ ತಾಂತ್ರಿಕ ದೋಷ ಪರಿಹರಿಸಿ ಸಮರ್ಪಕೆ ಸೇವೆ ಒದಗಿಸುವಂತೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಮೆಂಟ್ ಕಟ್ಟೆ ಮೇಲೆ ಬಿದ್ದಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು