SHIVAMOGGA LIVE NEWS | 14 MAY 2023
SHIMOGA : ಸ್ನೇಕ್ ಕಿರಣ್ ಅವರಿಗೆ ಕೊಳಕಮಂಡಲ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂಜಪ್ಪ ಆಸ್ಪತ್ರೆಯ (Hospital) ಎಂಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಶಿವಮೊಗ್ಗದ ಚಟ್ನಹಳ್ಳಿಯ ಬಳಿ ಕೊಳಕ ಮಂಡಲ ಹಾವು ಬಂದಿರುವುದಾಗಿ ಕರೆ ಬಂದಿತ್ತು. ಹಾವು ಹಿಡಿಯಲು ಸ್ನೇಕ್ ಕಿರಣ್ ತೆರಳಿದ್ದರು. ಈ ವೇಳೆ ಕೊಳಕ ಮಂಡಲ ಹಾವು ಸ್ನೇಕ್ ಕಿರಣ್ ಅವರ ಕಾಲಿಗೆ ಕಚ್ಚಿದೆ.
ಇದನ್ನೂ ಓದಿ – ಆಯನೂರು ಬಳಿ ಅಪಘಾತ, ಯುವಕನ ಪಾಲಿಗೆ ಯಮ ಸ್ವರೂಪಿಯಾದ ಆಂಬುಲೆನ್ಸ್
ಕೂಡಲೆ ಸ್ನೇಕ್ ಕಿರಣ್ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ (Hospital) ದಾಖಲು ಮಾಡಲಾಯಿತು. ಅವರನ್ನು ಎಂಐಸಿಯು ವಾರ್ಡ್ಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನಡೆಯುತಿದೆ. ಈ ಹಿಂದೆ ಸ್ನೇಕ್ ಕಿರಣ್ ಅವರಿಗೆ ಮಿಡಿ ನಾಗರ ಹಾವು ಕಚ್ಚಿತ್ತು. ಆಗಲು ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.