ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
JUST MAHITI, 22 SEPTEMBER 2024 : ಕಾಳಸಂತೆಯಲ್ಲಿ ಈರುಳ್ಳಿ (Onion) ಅಕ್ರಮ ದಾಸ್ತಾನು ಮತ್ತು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾಗಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಮೊಬೈಲ್ ವ್ಯಾನ್ಗೆ ಚಾಲನೆ ನೀಡುತ್ತಿದೆ. ಸೋಮವಾರದಿಂದ ಈರುಳ್ಳಿ ಮಾರಾಟ ಗಾಡಿಗಳು ರಸ್ತೆಗಿಳಿಯಲಿವೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್ಸಿಸಿಎಫ್) ಮೂಲಕ ಈ ವ್ಯಾನುಗಳು ಸಂಚರಿಸಲಿವೆ. ಬೆಂಬಲ ಬೆಲೆಯಲ್ಲಿ ಅಂದರೆ ಈರುಳ್ಳಿ ಕೆಜಿಗೆ 35 ರೂ. ನಿಗದಿಗೊಳಿಸಲಾಗಿದ್ದು, ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಈರುಳ್ಳಿ ಒದಗಿಸುವ ಉದ್ದೇಶವಿದೆ.

ಮುಂಬೈನಲ್ಲಿ ಈಗಾಗಲೇ ರಿಯಾಯಿತಿ ದರದಲ್ಲಿ ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಿಗೆ ಬೆಂಗಳೂರಿನಲ್ಲಿ ವ್ಯಾನ್ಗಳನ್ನು ಪರಿಚಯಿಸಲಾಗುತ್ತಿದೆ.
ಇದನ್ನೂ ಓದಿ » ಸುಪ್ರೀಂ ಕೋರ್ಟ್ನ ಯು ಟ್ಯೂಬ್ ಖಾತೆ ಹ್ಯಾಕ್, ಈಗ ಪುನಾರಂಭ
LATEST NEWS
- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

- ರೈಲಿಗೆ ತಲೆ ಕೊಟ್ಟು ಯುವಕ ಸಾವು, ತುರ್ತು ಬ್ರೇಕ್ ಹಾಕಿದ ಲೋಕೊ ಪೈಲೆಟ್

About The Editor
ನಿತಿನ್ ಆರ್.ಕೈದೊಟ್ಲು





