ಕೇಂದ್ರ ಸರ್ಕಾರದಿಂದಲೇ ಬೀದಿ ಬೀದಿಯಲ್ಲಿ ಈರುಳ್ಳಿ ಮಾರಾಟ, ಯಾಕೆ?

JUST MAHITI, 22 SEPTEMBER 2024 : ಕಾಳಸಂತೆಯಲ್ಲಿ ಈರುಳ್ಳಿ (Onion) ಅಕ್ರಮ ದಾಸ್ತಾನು ಮತ್ತು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗ್ರಾಹಕರಿಗೆ ನೇರವಾಗಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಮೊಬೈಲ್‌ ವ್ಯಾನ್‌ಗೆ ಚಾಲನೆ ನೀಡುತ್ತಿದೆ. ಸೋಮವಾರದಿಂದ ಈರುಳ್ಳಿ ಮಾರಾಟ ಗಾಡಿಗಳು ರಸ್ತೆಗಿಳಿಯಲಿವೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್‌ಸಿಸಿಎಫ್) ಮೂಲಕ ಈ ವ್ಯಾನುಗಳು ಸಂಚರಿಸಲಿವೆ. ಬೆಂಬಲ ಬೆಲೆಯಲ್ಲಿ ಅಂದರೆ ಈರುಳ್ಳಿ ಕೆಜಿಗೆ 35 ರೂ. ನಿಗದಿಗೊಳಿಸಲಾಗಿದ್ದು, ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಈರುಳ್ಳಿ ಒದಗಿಸುವ ಉದ್ದೇಶವಿದೆ.

onion by central government

ಮುಂಬೈನಲ್ಲಿ ಈಗಾಗಲೇ ರಿಯಾಯಿತಿ ದರದಲ್ಲಿ ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಿಗೆ ಬೆಂಗಳೂರಿನಲ್ಲಿ ವ್ಯಾನ್‌ಗಳನ್ನು ಪರಿಚಯಿಸಲಾಗುತ್ತಿದೆ.

ಇದನ್ನೂ ಓದಿ » ಸುಪ್ರೀಂ ಕೋರ್ಟ್‌ನ ಯು ಟ್ಯೂಬ್‌ ಖಾತೆ ಹ್ಯಾಕ್‌, ಈಗ ಪುನಾರಂಭ

Leave a Comment