ತುಂಗಾ ಚಾನಲ್‌ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್‌ ದಾಳಿ, ಒಬ್ಬ ಎಸ್ಕೇಪ್‌, ಮತ್ತೊಬ್ಬ ಅರೆಸ್ಟ್‌

Published On : ಮಾರ್ಚ್ 7, 2026

Published By : ನಿತಿನ್‌ ಆರ್‌.ಕೈದೊಟ್ಲು 

number-1-advt-copy-new.webp

ಶಿವಮೊಗ್ಗ: ಇಲಿಯಾಜ್ ನಗರದ ಫಾತಿಮಾ ರಸ್ತೆಯಲ್ಲಿ ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ (police seize). ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಸವಾಯಿ ಪಾಳ್ಯ ಮುಖ್ಯ ರಸ್ತೆಯ ಶಾದಾಬ್ ಶಾದಿ ಮಹಲ್ ಸಮೀಪದ ನಿವಾಸಿ, ಬಟ್ಟೆ ವ್ಯಾಪಾರಿ ಮೊಹಮ್ಮದ್ ಹಮ್ಮದ್ ಅಜರುದ್ದೀನ್ (28) ಬಂಧಿತ. ಈತನಿಂದ 2 ಕೆ.ಜಿ 66ಗ್ರಾಂ ಒಣ ಗಾಂಜಾ ಹಾಗೂ ಸ್ಕೂಟಿ ವಶಪಡಿಸಿಕೊಳ್ಳಲಾಗಿದೆ.ಮತ್ತೊಬ್ಬ ಆರೋಪಿ ವಸೀಂ ಅಕ್ರಮ್ ಅಲಿಯಾಸ್ ಸೈಲೆಂಟ್ ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Police-arrest-one-person-in-relation-to-NDPS-Act.

ಬಂಧಿತ ಆರೋಪಿಯ ಮೇಲೆ ಈ ಹಿಂದೆ ದೊಡ್ಡಪೇಟೆ ಹಾಗೂ ತುಂಗಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಲಾಗಿದೆ. .

ಇದನ್ನೂ ಓದಿ – ರೈಲಿಗೆ ತಲೆ ಕೊಟ್ಟು ಯುವಕ ಸಾವು, ತುರ್ತು ಬ್ರೇಕ್‌ ಹಾಕಿದ ಲೋಕೊ ಪೈಲೆಟ್‌

Sunrise Facility Services, Sri sai Trust Shimoga

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 7, 2026

Leave a Comment