ಕನ್ನಡದ 8 ಜ್ಞಾನಪೀಠ ಪುರಸ್ಕೃತರ ಪೈಕಿ ಇಬ್ಬರು ಶಿವಮೊಗ್ಗ ಜಿಲ್ಲೆಯವರು | ನಂಬರ್ ಗಳಲ್ಲಿ ನಮ್ಮೂರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 ನಂಬರ್ ಗಳಲ್ಲಿ ನಮ್ಮೂರು 

ನಾವು ಶಿವಮೊಗ್ಗ ಜಿಲ್ಲೆಯವರು ಎಂದು ಹೆಮ್ಮೆಯಿಂದ ಬೀಗಲು ನೂರಾರು ಕಾರಣಗಳಿವೆ. ನಂಬರ್ ಗಳ ಮೂಲಕ ಅವುಗಳನ್ನು ಪ್ರಸ್ತುತಪಡಿಸಿದರೆ ಇನ್ನಷ್ಟು ಉತ್ತಮ. ಇದೆ ಕಾರಣಕ್ಕೆ ನಾವು ಹೆಮ್ಮೆ ಪಡುವಂತಹ ಸಂಗತಿಗಳನ್ನು ನಂಬರ್ ಗಳ ಮೂಲಕ ತಿಳಿಸುವ ಪ್ರಯತ್ನವಿದು. ಮೊದಲ ಕಂತಿನಲ್ಲಿ ಜ್ಞಾನಪೀಠಿಗಳ ವಿಚಾರವನ್ನು ನಿಮ್ಮ ಮುಂದಿಟ್ಟಿದ್ದೇವೆ. ಜ್ಞಾನಪೀಠ ಪಡೆದ ಇಬ್ಬರು ಸಾಹಿತಿಗಳು ಶಿವಮೊಗ್ಗ ಜಿಲ್ಲೆಯವರು ಅನ್ನುವುದು ಕನ್ನಡಿಗರಾಗಿ, ಈ ಜಿಲ್ಲೆಯವರಾಗಿ ನಾವು ಹೆಮ್ಮೆ ಪಡುವ ವಿಚಾರ.

SHIVAMOGGA LIVE NEWS | 19 JANUARY 2023

SHIMOGA | ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಜ್ಞಾನಪೀಠವು ಒಂದು. ಸರ್ವ Numbergalalli-Nammuruಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೂ ಕನ್ನಡದ 8 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಈ ಪೈಕಿ ಇಬ್ಬರು ಶಿವಮೊಗ್ಗ ಜಿಲ್ಲೆಯವರು ಎಂಬುದು ವಿಶೇಷ.

ಇಬ್ಬರು ಒಂದೇ ತಾಲೂಕಿನವರು

ಕನ್ನಡ ಸಾಹಿತ್ಯಕ್ಕೆ ಮೊದಲು ಜ್ಞಾನಪೀಠ ತಂದುಕೊಟ್ಟವರು ರಾಷ್ಟ್ರಕವಿ ಕುವೆಂಪು. 1994ರಲ್ಲಿ ಸಾಹಿತಿ ಪ್ರೊ. ಯು.ಆರ್.ಅನಂತ ಮೂರ್ತಿ ಅವರಿಗೆ ಜ್ಞಾನಪೀಠ ಲಭಿಸಿತು. ಇವರಿಬ್ಬರು ತೀರ್ಥಹಳ್ಳಿಯವರು. ಇಬ್ಬರು ಜ್ಞಾನಪೀಠಿಗಳನ್ನು ಪಡೆದ ಜಿಲ್ಲೆ ಎಂಬುದು ಶಿವಮೊಗ್ಗದವರಿಗೆ ಹೆಮ್ಮೆಯ ಸಂಗತಿ.

Kuvempu-UR-ananthamurthy-Numbergalalli-Nammuru

ಕನ್ನಡಕ್ಕೆ 8 ಜ್ಞಾನಪೀಠ

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮೊದಲ ಜ್ಞಾನಪೀಠ ಪ್ರಶಸ್ತಿ. ಕುವೆಂಪು ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕುಪ್ಪಳಿಯವರು.

ದ.ರಾ.ಬೇಂದ್ರ ಅವರ ನಾಕುತಂತಿ ಕವನ ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ ಲಭಿಸಿತು. ದ.ರಾ.ಬೇಂದ್ರೆ ಅವರು ಧಾರವಾಡ ಜಿಲ್ಲೆಯವರು.

ಶಿವರಾಮ ಕಾರಂತ ಅವರ ಮೂಕಜ್ಜಿಯ ಕನಸು ಕಾದಂಬರಿಗಾಗಿ 1977ರಲ್ಲಿ ಜ್ಞಾನಪೀಠ ಸಿಕ್ಕಿತು. ಅವರು ಉಡುಪಿ ಜಿಲ್ಲೆಯವರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ ಕೃತಿ ಮತ್ತು ಸಮಗ್ರ ಸಾಹಿತ್ಯಕ್ಕೆ 1983ರಲ್ಲಿ ಜ್ಞಾನಪೀಠ ದೊರೆಯಿತು. ಇವರು ಕೋಲಾರ ಜಲ್ಲೆಯವರು.

ವಿ.ಕೃ.ಗೋಕಾಕ ಅವರ ಸಮಗ್ರ ಸಾಹಿತ್ಯಕ್ಕೆ 1990ರಲ್ಲಿ ಜ್ಞಾನಪೀಠ ಸಿಕ್ಕಿತು. ವಿ.ಕೃ.ಗೋಕಾಕ ಅವರು ಹಾವೇರಿ ಜಿಲ್ಲೆಯ ಸವಣೂರಿನವರು.

Jnanapeeta award

ಪ್ರೊ. ಯು.ಆರ್.ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಲಭಿಸಿತು. ಪ್ರೊ. ಯು.ಆರ್.ಅನಂತಮೂರ್ತಿ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೇಳಿಗೆಯವರು.

ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಲಭಿಸಿತು. ಗಿರೀಶ್ ಕಾರ್ನಾಡ್ ಅವರು ಮುಂಬೈನಲ್ಲಿ ಜನಸಿದರು. ಶಿರಸಿ, ಧಾರವಾಡದಲ್ಲಿ ಬೆಳದವರು. ಕೊನೆಯವರೆಗು ಬೆಂಗಳೂರಿನಲ್ಲಿ ಬದುಕು ನಡೆಸಿದರು.

ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಚಂದ್ರಶೇಖರ ಕಂಬಾರ ಅವರು ಬೆಳಗಾವಿ ಜಿಲ್ಲೆಯವರು.

ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 19, 2023

Leave a Comment