ಮೈಸೂರು ತಾಳಗುಪ್ಪ ರೈಲು ನಿಲುಗಡೆ ಕುರಿತು ಮಹತ್ವದ ಅಪ್‌ಡೇಟ್‌, ಕುಂಸಿ, ಅರಸಾಳು ಭಾಗದವರಿಗೆ ಗುಡ್‌ ನ್ಯೂಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಹೊಸನಗರ ತಾಲೂಕು ಅರಸಾಳು ಮತ್ತು ಶಿವಮೊಗ್ಗ ತಾಲೂಕು ಕುಂಸಿ ನಿಲ್ದಾಣಗಳಲ್ಲಿ (Railway Station) ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ಎರಡು ಎಕ್ಸ್‌ಪ್ರೆಸ್‌ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ರೈಲ್ವೆ ಇಲಾಖೆ ಮುಂದುವರಿಸಿದೆ.

ರಾತ್ರಿ ವೇಳೆ ಸಂಚರಿಸುವ ಮೈಸೂರು ತಾಳಗುಪ್ಪ(16227/16228) ಎಕ್ಸ್‌ಪ್ರೆಸ್ ರೈಲು ಮತ್ತು ಹಗಲಿನಲ್ಲಿ ಹಾಸನ ಮಾರ್ಗವಾಗಿ ಸಂಚರಿಸುವ ಮೈಸೂರು ತಾಳಗುಪ್ಪ (16206/16205) ರೈಲುಗಳು ಈ ಎರಡೂ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ತಲಾ 1 ನಿಮಿಷ ನಿಲುಗಡೆ ಮಾಡಲಾಗುತ್ತಿತ್ತು. ಪ್ರಯಾಣಿಕರ ಅಪೇಕ್ಷೆ ಮೇರೆಗೆ ತಾತ್ಕಾಲಿಕ ನಿಲುಗಡೆಯನ್ನು 2026ನೇ ಫೆಬ್ರವರಿ 23ರ ವರೆಗೆ ಮುಂದುವರಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Train-Jan-Shatabdi-General-Image

ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ‍್ಯಾಂಕ್‌, ಏನಿದು ರ‍್ಯಾಂಕಿಂಗ್‌? ವಿವಿ ಪಡೆದ ಅಂಕಗಳೆಷ್ಟು?

ರೈಲುಗಳು ಕಾಯಂ ಆಗಿ ನಿಲುಗಡೆ ಮಾಡಲು ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚು ಟಿಕೆಟ್ ಖರೀದಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.

mysore talaguppa trains to stop at kumsi and arasalu Railway Station

Leave a Comment